ಗಣರಾಜ್ಯೋತ್ಸವ ಪರೇಡ್ ಗೆ ಸುಳ್ಯ ತಾಲೂಕಿನ ಅನನ್ಯ ಕೆ.ಪಿ. ಆಯ್ಕೆ

(ನ್ಯೂಸ್ ಕಡಬ) newskadaba.com ಸುಳ್ಯ, ಡಿ. 31. ನವದೆಹಲಿಯಲ್ಲಿ ನಡೆ ಯಲಿರುವ ಗಣ ರಾಜ್ಯೋತ್ಸವ ಪೆರೇಡ್‌ನಲ್ಲಿ ಭಾಗವಹಿಸಲು ತಾಲೂಕಿನ ಕಲ್ಮಡ್ಕ ಗ್ರಾಮದ ಪಡ್ಪಿನಂಗಡಿಯ ಎನ್ ಸಿಸಿ ವಿದ್ಯಾರ್ಥಿನಿ ಅನನ್ಯ ಕೆ.ಪಿ ಆಯ್ಕೆಯಾಗಿದ್ದಾರೆ.

ಉಜಿರೆ ಎಸ್ ಡಿಎಂ ಕಾಲೇಜಿನ ದ್ವಿತೀಯ ವರ್ಷದ ಪದವಿ ವಿದ್ಯಾರ್ಥಿನಿಯಾಗಿರುವ ಅನನ್ಯ ಕೆ.ಪಿ ಪಡ್ಪಿನಂಗಡಿ ಗ್ರಾಮದ ಕೃಷ್ಣಪ್ಪ ಪಾಲರ್ ಮತ್ತು ಶ್ರೀಮತಿ ಸತ್ಯಲತಾ ದಂಪತಿಗಳ ಪುತ್ರಿ.

Scroll to Top