ಸುಬ್ರಹ್ಮಣ್ಯ: ಸೇತುವೆ ಕೆಳಗೆ ದನದ ತಲೆ ಹಾಗೂ ತ್ಯಾಜ್ಯ ಎಸೆದ ಕಿಡಿಗೇಡಿಗಳು ➤‌ ಹಿಂಜಾವೇ ಖಂಡನೆ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಅ. 09. ಐನೆಕಿದು ಎಂಬಲ್ಲಿ ನದಿಯ ಸೇತುವೆಯ ಕೆಳಗೆ ದನದ ತಲೆ ಮತ್ತು ಗೋಣಿ ಚೀಲದಲ್ಲಿ ತ್ಯಾಜ್ಯ ತುಂಬಿ ಅದನ್ನು ನದಿ ನೀರಿಗೆ ಯಾರೋ ಕಿಡಿಗೇಡಿಗಳು ಎಸೆದಿರುವುದು ಬೆಳಕಿಗೆ ಬಂದಿದೆ.

ಘಟನೆಯ ಕುರಿತು ಸುಬ್ರಹ್ಮಣ್ಯ ಪೋಲಿಸರಿಗೆ ದೂರು ನೀಡಲಾಗಿದ್ದು, ಶೀಘ್ರವೇ ಆರೋಪಿಗಳನ್ನು ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಸುಳ್ಯ ತಾಲೂಕು ಹಿಂದೂ ಜಾಗರಣ ವೇದಿಕೆಯು ಆಗ್ರಹಿಸಿದೆ.

 

error: Content is protected !!
Scroll to Top