ಶ್ರೀಗಂಧದ ಮರ ಕಳ್ಳತನ ಪ್ರಕರಣ ➤ ಮೂವರು ಖಾಕಿ ಬಲೆಗೆ..!

(ನ್ಯೂಸ್ ಕಡಬ) newskadaba.com ಮಂಗಳೂರು, ಫೆ. 08. ಶ್ರೀಗಂಧದ ಮರ ಕಳ್ಳತನಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಕೊಣಾಜೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಬೆಳುವಾಯಿ ನಿವಾಸಿ ಸದ್ಯ ಕೆ.ಸಿ ನಗರದಲ್ಲಿ ವಾಸವಾಗಿರುವ ಮಜೀದ್ ಯಾನೆ ನವಾಝ್, ಬಂಟ್ವಾಳದ ಶರೀಫ್ ಯಾನೆ ದುನಿಯಾ ಶರೀಫ್ ಹಾಗೂ ವರ್ಕಾಡಿಯ ಲಕ್ಷ್ಮಣ ಶೆಟ್ಟಿ ಎಂದು ಗುರುತಿಸಲಾಗಿದೆ. ಆರೋಪಿಗಳಿಂದ ಸುಮಾರು 25,000ರೂ. ಮೌಲ್ಯದ 41.1 ಕೆಜಿ ತೂಕದ 14 ಶ್ರೀಗಂಧದ ಮರದ ತುಂಡುಗಳನ್ನು ವಶಕ್ಕೆ ಪಡೆದಿದ್ದಾರೆ.

Also Read  ರಾಜ್ಯದಲ್ಲಿ ಸದ್ದಿಲ್ಲದೆ ಹರಡುತ್ತಿದೆ ಹೊಸ ಮಾದರಿಯ ಸೋಂಕು⁉️ ➤ ಸುಳಿವು ಬಿಟ್ಟುಕೊಟ್ಟ ಆರೋಗ್ಯ ಸಚಿವರು..‼️

error: Content is protected !!
Scroll to Top