ಜೆಸಿಐ ಸುಳ್ಯ ಸಿಟಿ ಪದಗ್ರಹಣ ಸಮಾರಂಭ

(ನ್ಯೂಸ್ ಕಡಬ) newskadaba.com ಸುಳ್ಯ, ಜ. 28. ಜೇಸೀಐ ಸುಳ್ಯ ಸಿಟಿಯ ನೂತನ ಅಧ್ಯಕ್ಷ ಬಶೀರ್ ಯು.ಪಿ ಹಾಗೂ ಅವರ ತಂಡದ ಪದಗ್ರಹಣ ಸಮಾರಂಭವು ಸುಳ್ಯ ದ ಪರಿವಾರಕಾನದಲ್ಲಿರುವ ಹೋಟೆಲ್ ಗ್ರಾಂಡ್ ಪರಿವಾರ್ ನಲ್ಲಿ ನಡೆಯಿತು.


ಇದರ ಮುಖ್ಯ ಅತಿಥಿಗಳಾಗಿ ಸುದ್ದಿ ಬಿಡುಗಡೆ ಪ್ರಧಾನ ವರದಿಗಾರ ಮತ್ತು ಸುಳ್ಯ ಪ್ರೆಸ್ ಕ್ಲಬ್ ಅಧ್ಯಕ್ಷರಾದ ಹರೀಶ್ ಬಂಟ್ವಾಳ್ ಮತ್ತು ವಲಯ 15 ರ ಅಧ್ಯಕ್ಷರಾದ ರೋಯನ್ ಉದಯ್ ಕ್ರಾಸ್ತಾ ರವರು ಹಾಗೂ ಗೌರವ ಉಪಸ್ಥಿತರಾಗಿ ಸುಳ್ಯ ಸಿಟಿಯ ಸ್ಥಾಪಕ ಮನಮೋಹನ್ ಬಳ್ಳಡ್ಕ ಮತ್ತು ವಲಯ 15 ರ ಉಪಾಧ್ಯಕ್ಷರಾದ ರವಿಚಂದ್ರ ಪಾಟಾಳಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಸುಮಾರು 10 ಸದಸ್ಯರು ಜೇಸೀ ತತ್ವಾದರ್ಶಗಳನ್ನು ಒಪ್ಪಿಕೊಂಡು ಜೇಸೀಐ ಗೆ ಸೇರ್ಪಡೆಗೊಂಡರು. ವೇದಿಕೆಯಲ್ಲಿ ನಿಕಟಪೂರ್ವ ಅಧ್ಯಕ್ಷ ವಿನಯ್ ರಾಜ್ ಮಡ್ತಿಲ ವಲಯಾಧಿಕಾರಿ ತೀರ್ಥವರ್ಣ ಬಳ್ಳಡ್ಕ ಉಪಸ್ಥಿತರಿದ್ದರು. ಚಂದ್ರಶೇಖರ ಕನಕಮಜಲು ಸ್ವಾಗತಿಸಿ ಶಶಿಧರ್ ಎಕ್ಕಡ್ಕ ವಂದಿಸಿದರು.

 

 

 

 

 

error: Content is protected !!

Join the Group

Join WhatsApp Group