ಕೊರೋನಾ ಪ್ರಕರಣ ತೀವ್ರ ಹೆಚ್ಚಾದಲ್ಲಿ ಶಾಲಾ- ಕಾಲೇಜು ಬಂದ್ ಗೆ ಸಿದ್ದ ➤ ಸಚಿವ ಬಿ.ಸಿ ನಾಗೇಶ್

(ನ್ಯೂಸ್ ಕಡಬ) newskadaba.com ಬೆಂಗಳೂರು, ಡಿ. 06. ರಾಜ್ಯದಲ್ಲಿ ಕೊರೋನಾ ಪ್ರಕರಣ ಹೆಚ್ಚಳವಾಗುತ್ತಿರುವ ಹಿನ್ನೆಲೆ, ಶಾಲೆಗಳನ್ನು ಬಂದ್ ಮಾಡುವ ಕುರಿತು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಬಿಸಿ ನಾಗೇಶ್ ಮಹತ್ವದ ಹೇಳಿಕಯೊಂದನ್ನು ನೀಡಿದ್ದಾರೆ.


ಈ ಕುರಿತು ಸುದ್ದಿಗಾರಗೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಾದರೆ ಶಾಲೆಗಳನ್ನು ಬಂದ್ ಮಾಡಲು ಸಿದ್ದ. ಈ ಕುರಿತು ತಜ್ಞರೊಂದಿಗೆ ಪ್ರತಿದಿನ ವರದಿ ಪಡೆಯುತ್ತಿದ್ದೇವೆ. ವರದಿಯ ಪ್ರಕಾರ ಕೋವಿಡ್ ಪ್ರಕರಣದಲ್ಲಿ ತೀವ್ರ ಹೆಚ್ಚಳ ಉಂಟಾದರೆ ಶಾಲೆಗಳನ್ನು ಬಂದ್ ಮಾಡಲು ಸಿದ್ದ. ಪೋಷಕರು ಯಾವುದೇ ರೀತಿ ಆತಂಕ ಪಡಬೇಡಿ ಎಂದು ಹೇಳಿದ್ದಾರೆ.

Also Read  ಪಂಜ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಅರೆಭಾಷೆ ಅಧ್ಯಕ್ಷರ ಭೇಟಿ ➤ ದೇವಸ್ಥಾನದ ವತಿಯಿಂದ ಗೌರವ ಅರ್ಪಣೆ

 

 

 

error: Content is protected !!
Scroll to Top