ನೇತ್ರಾವತಿ ನದಿಯಲ್ಲಿ ಮಹಿಳೆಯ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆ ➤ ಬೆಳ್ಳಾರೆಯ ಮಹಿಳೆಯ ಮೃತದೇಹದ ಶಂಕೆ

(ನ್ಯೂಸ್ ಕಡಬ) newskadaba.com ಮಂಗಳೂರು, ನ. 27. ಇಲ್ಲಿನ ನೇತ್ರಾವತಿ ನದಿ ತೀರದಲ್ಲಿ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಅಪರಿಚಿತ ಮಹಿಳೆಯ ಮೃತದೇಹವೊಂದು ಇಂದು ಬೆಳಗ್ಗೆ ಸಂಪೂರ್ಣ ವಿವಸ್ತ್ರ ಸ್ಥಿತಿಯಲ್ಲಿ ಪತ್ತೆಯಾಗಿದೆ.

 

ವಾರದ ಹಿಂದೆ ಬಂಟ್ವಾಳ ಪಾಣೆ ಮಂಗಳೂರಿನ ನೇತ್ರಾವತಿ ಸೇತುವೆಯಿಂದ ಬೆಳ್ಳಾರೆ ಮೂಲದ ಮಹಿಳೆಯೋರ್ವರು ನದಿಗೆ ಜಿಗಿದು ನಾಪತ್ತೆಯಾಗಿದ್ದ ಘಟನೆ ನಡೆದಿತ್ತು. ಈಗ ಪತ್ತೆಯಾಗಿರುವ ಮೃತದೇಹವು ಅದೇ ಮಹಿಳೆಯದ್ದ ಆಗಿರಬಹುದೇ ಎಂದು ಶಂಕಿಸಲಾಗಿದೆ. ಮೃತದೇಹವನ್ನು ಮೇಲಕ್ಕೆತ್ತುವಲ್ಲಿ ಹೊಯ್ಗೆ ಕಿಂಗ್ ಸ್ಟಾರ್ ಸೇವಾ ಸಮಿತಿಯ ಪ್ರೇಮ್ ಪ್ರಕಾಶ್ ಡಿಸೋಜ, ರಾಕೇಶ್ ಪ್ರಶಾಂತ್ ಡಿಸೋಜ, ಅನಿಲ್ ಮೊಂತೇರೊ ಮತ್ತು ನಿಶಾನ್ ಜಾಯ್ ಲೋಬೋ, ಅವರು ಸಹಕರಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಉಳ್ಳಾಲ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಿ, ಪರಿಶೀಲನೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

Also Read  ಪಬ್-ಜಿ ಪ್ರಭಾವ ➤ ತಾಯಿ ಹಾಗೂ ಸಹೋದರ ಸಹೋದರಿಯನ್ನು ಹತ್ಯೆಗೈದ 14ರ ಬಾಲಕ..!

 

error: Content is protected !!
Scroll to Top