ಕರ್ನಾಟಕ ರಾಜ್ಯ ಮಲೆಯಾಳಿ ಕ್ರಿಶ್ಚಿಯನ್ ಅಸೋಸಿಯೇಷನ್ (ರಿ.) ► ರಾಜ್ಯ ಸಂಯೋಜಕರಾಗಿ ಎ.ಸಿ.ಕುರಿಯನ್ ನೇಮಕ

(ನ್ಯೂಸ್ ಕಡಬ) newskadaba.com ಮಂಗಳೂರು, ನ.02. ಕರ್ನಾಟಕ ರಾಜ್ಯ ಮಲೆಯಾಳಿ ಕ್ರಿಶ್ಚಿಯನ್ ಅಸೋಸಿಯೇಷನ್(ರಿ.) ಇದರ ರಾಜ್ಯ ಸಂಯೋಜಕರನ್ನಾಗಿ ಉದ್ಯಮಿ ಎ.ಸಿ. ಕುರಿಯನ್ ರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.

ಸಂಘದ ನಿಬಂಧನೆಗಳ ಅನುಸಾರ ರಾಜ್ಯದಲ್ಲಿರುವ ಕ್ರೈಸ್ತ ಧರ್ಮದ ವಿವಿಧ ಧರ್ಮ ಸಭೆಗಳಲ್ಲಿರುವ ಕ್ರೈಸ್ತ ಬಾಂಧವರನ್ನು ಸಂಘಟಿಸಿ ಸಂಘದ ಸದಸ್ಯರನ್ನಾಗಿಸುವ ಮೂಲಕ ಮಲೆಯಾಳಿ ಕ್ರೈಸ್ತ ಸಮುದಾಯದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುವಂತೆ ಕೋರಿ ಎ.ಸಿ.ಕುರಿಯನ್ ರವರನ್ನು ನೇಮಿಸಿ‌ ಅಧ್ಯಕ್ಷರಾದ ಎ.ಸಿ.ಜಯರಾಜ್ ರವರು ಆದೇಶಿಸಿದ್ದಾರೆ.

error: Content is protected !!
Scroll to Top