ಕೂಳೂರು ನಾಗನಕಟ್ಟೆ ದ್ವಂಸಗೈದ ದುಷ್ಕರ್ಮಿಗಳು ➤ ಕಿಡಿಗೇಡಿಗಳ ಪತ್ತೆಗೆ ಆಗ್ರಹ

(ನ್ಯೂಸ್ ಕಡಬ) Newskadaba.com ಮಂಗಳೂರು, ಅ. 23. ಇಲ್ಲಿನ ಕೂಳೂರು ವಿ ಆರ್ ಎಲ್ ಬಳಿಯಿರುವ ನಾಗನ ಕಟ್ಟೆಯನ್ನು ಯಾರೋ ದುಷ್ಕರ್ಮಿಗಳು ದ್ವಂಸಗೈದಿರುವ ಘಟನೆ ಬೆಳಕಿಗೆ ಬಂದಿದೆ.

ಇತ್ತೀಚೆಗೆ ಕೆಲ ದಿನಗಳಿಂದ ಇಂತಹ ಶಾಂತಿ ಕದಡುವ ದುಷ್ಕೃತ್ಯಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿದ್ದು, ಈ ಕೃತ್ಯದ ಹಿಂದಿನ ಕಿಡಿಗೇಡಿಗಳನ್ನು ಪತ್ತೆಹಚ್ಚಿ ಬಂಧಿಸಲು ಹಿಂದೂ ಸಂಘಟನೆಗಳು ಆಗ್ರಹಿಸಿವೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ತನಿಖೆ ಮುಂದುವರಿಸಿದ್ದಾರೆ.

Scroll to Top