ಸೆಲ್ಫಿ ಹುಚ್ಚಿಗೆ ಪ್ರಾಣ ಕಳೆದುಕೊಂಡ ಇಬ್ಬರು ಆಪ್ತ ಸ್ನೇಹಿತರು

(ನ್ಯೂಸ್ ಕಡಬ) newskadaba.com ಮಂಡ್ಯ, ಸೆ.24. ನಿರ್ಜನ ಪ್ರದೇಶದ ಜಲಪಾತದಲ್ಲಿ ಸೆಲ್ಫಿ ತೆಗೆಯುತ್ತಿದ್ದ ವೇಳೆ ನೀರಿಗೆ ಬಿದ್ದು ಆಪ್ತ ಸ್ನೇಹಿತರಿಬ್ಬರು ಪ್ರಾಣ ಕಳೆದುಕೊಂಡ ಘಟನೆ ಮಂಡ್ಯದಿಂದ ವರದಿಯಾಗಿದೆ.

ಮೃತ ಸ್ನೇಹಿತರನ್ನು ಬೆಂಗಳೂರು ನಿವಾಸಿಗಳಾದ ಶಾಮ್ವೆಲ್ ಜೇಕಬ್(21) ಹಾಗೂ ಸಿಬಲ್ ಥಾಮಸ್ (21) ಎಂದು ಗುರುತಿಸಲಾಗಿದೆ. ಆಪ್ತ ಸ್ನೇಹಿತರಾಗಿದ್ದ ಇವರು ದ್ವಿಚಕ್ರ ವಾಹನದಲ್ಲಿ ಮಂಡ್ಯ ಪ್ರವಾಸಕ್ಕೆ ತೆರಳಿದ್ದು, ಗಗನಚುಕ್ಕಿ ಜಲಪಾತ ವೀಕ್ಷಿಸಿ ಆ ಬಳಿಕ ಗಾಣಾಳು ಫಾಲ್ಸ್ ಗೆ ತೆರಳಿದ್ದಾರೆ. ನಿರ್ಜನ ಪ್ರದೇಶವಾಗಿರುವ ಗಾಣಾಳು ಫಾಲ್ಸ್ ನಲ್ಲಿ ಸೆಲ್ಫಿ ತೆಗೆಯುತ್ತಿದ್ದ ವೇಳೆ ನೀರಿಗೆ ಬಿದ್ದು ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಕಳೆದೆರಡು ದಿನಗಳಿಂದ ಸ್ಥಳದಲ್ಲಿದ್ದ ಅಪರಿಚಿತ ಬೈಕ್ ಕಂಡು ಅರಣ್ಯಾಧಿಕಾರಿಗಳು ತಪಾಸಣೆ ನಡೆಸಿದಾಗ ಇಬ್ಬರ ಮೃತದೇಹ ಪತ್ತೆಯಾಗಿದೆ.

 

Also Read  ಕಾಲೇಜಿನ ಫೀಸ್ ಹಣದೊಂದಿಗೆ ಸಹಾಯಕ ಪ್ರಾಧ್ಯಾಪಕಿ ನಾಪತ್ತೆ - ವಿದ್ಯಾರ್ಥಿಗಳ ಪರದಾಟ

 

 

error: Content is protected !!
Scroll to Top