ಕೈಕಂಬ: ಅಂಗಡಿಯ ಮೇಲೆ ಬಿದ್ದ ಮರ ➤ ಮೇಲ್ಛಾವಣಿಗೆ ಹಾನಿ

(ನ್ಯೂಸ್ ಕಡಬ) newskadaba.com ಕಡಬ, ಜು.14. ಭಾರೀ ಗಾಳಿ ಮಳೆಗೆ ಬಿಳಿನೆಲೆ ಗ್ರಾಮದ ಕೈಕಂಬದಲ್ಲಿ ಅಂಗಡಿಯ ಮೇಲೆ ಮರ ಬಿದ್ದು ಮೇಲ್ಛಾವಣಿಗೆ ಹಾನಿಯಾದ ಘಟನೆ ಬುಧವಾರದಂದು ನಡೆದಿದೆ.

ಕೈಕಂಬ ಜಂಕ್ಷನ್ ನಲ್ಲಿರುವ ದಿವ್ಯಾ ಎಂಬವರಿಗೆ ಸೇರಿದ ಅಂಗಡಿಯ ಮೇಲೆ ಮರ ಬಿದ್ದಿದ್ದು, ಮೇಲ್ಛಾವಣಿಯ ಸಿಮೆಂಟ್ ಶೀಟುಗಳು ಹಾನಿಯಾಗಿವೆ. ಅಪಾಯಕಾರಿ ಮರವನ್ನು ತೆರವುಗೊಳಿಸಲು ಅನುಮತಿ ಕೋರಿ ಅರಣ್ಯ ಇಲಾಖೆಗೆ ಕಳೆದ ಕೆಲವು ವರ್ಷಗಳಿಂದ ನಿರಂತರ ಮನವಿ ಸಲ್ಲಿಸಲಾಗಿದ್ದು, ಅರಣ್ಯ ಇಲಾಖೆಯವರು ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

Also Read  ಸುಳ್ಯ: ತಲವಾರು ಹಿಡಿದು ಸುತ್ತಾಡಿದ ಯುವಕ ಅರೆಸ್ಟ್.!

 

 

 

error: Content is protected !!
Scroll to Top