ಉಳ್ಳಾಲ: ವಿದ್ಯಾರ್ಥಿಗಳ ಮೇಲಿನ ಪೊಲೀಸರ ಚಿತ್ರಹಿಂಸೆ ಖಂಡಿಸಿ ಹಾಗೂ ಅಮಾನತಿಗೆ ಆಗ್ರಹಿಸಿ ದ.ಕ ಜಿಲ್ಲಾ ವಿದ್ಯಾರ್ಥಿ ನಾಯಕರ ಹಕ್ಕೊತ್ತಾಯ ಸಭೆ

(ನ್ಯೂಸ್ ಕಡಬ) newskadaba.com ಮಂಗಳೂರು, ಮಾ. 18. ವಿದ್ಯಾರ್ಥಿಗಳ ಮೇಲಿನ ಉಳ್ಳಾಲ ಪೋಲಿಸರ ಚಿತ್ರಹಿಂಸೆಯನ್ನು ಖಂಡಿಸಿ ಹಾಗೂ ಹಲ್ಲೆಗೈದ ಪೋಲಿಸರ ತಕ್ಷಣ ಅಮಾನತ್ತಿಗೆ ಆಗ್ರಹಿಸಿ ದ‌.ಕ ಜಿಲ್ಲಾ ವಿದ್ಯಾರ್ಥಿ ನಾಯಕರ ಹಕ್ಕೊತ್ತಾಯ ಸಭೆಯು ಮಂಗಳೂರಿನಲ್ಲಿ ನಡೆಯಿತು.

ಹಲ್ಲೆಗೈದ ಪೊಲೀಸರನ್ನು ಅಮಾನತ್ತು ಮಾಡುವವರೆಗೂ ನಾವು ಹೋರಾಟ ನಡೆಸಬೇಕಾಗಿದೆ ಎಂಬುವುದಾಗಿ ಚರ್ಚೆ ನಡೆಯಿತು. ಮುಂದಿನ ಹೋರಾಟದ ಬಗ್ಗೆ ರೂಪುರೇಷೆಗಳನ್ನು ಇದೇ ಸಂದರ್ಭದಲ್ಲಿ ನಡೆಸಲಾಯಿತು. ದ.ಕ ಜಿಲ್ಲೆಯ ವಿವಿಧ ವಿದ್ಯಾರ್ಥಿ ಸಂಘಟನೆಯ ವಿದ್ಯಾರ್ಥಿ ನಾಯಕರುಗಳು ಹಾಗೂ ವಿವಿಧ ಕಾಲೇಜಿನ ವಿದ್ಯಾರ್ಥಿ ಪ್ರತಿನಿಧಿಗಳು ಉಪಸ್ಥಿತರಿದ್ದರು.

Also Read  ಉಡುಪಿ: ಮಲ್ಪೆ ಹಲ್ಲೆ ಕೇಸ್; ದೌರ್ಜನ್ಯ ಪ್ರಕರಣ ರದ್ದುಗೊಳಿಸುವಂತೆ ಸಂತ್ರಸ್ತೆ ಮನವಿ

error: Content is protected !!
Scroll to Top