ಇಂದು ನೆಕ್ಕಿತ್ತಡ್ಕ ಉರೂಸ್ ಸಮಾರೋಪ ➤ ಪೇರೋಡ್ ಅಬ್ದುರ್ರಹ್ಮಾನ್ ಸಖಾಫಿ ಇಂದು ನೆಕ್ಕಿತ್ತಡ್ಕಕ್ಕೆ

(ನ್ಯೂಸ್ ಕಡಬ) newskadaba.com ಕಡಬ, ಮಾ.11. ಜಾತಿ, ಮತ, ಭೇದವಿಲ್ಲದೆ ಹಲವಾರು ಕಷ್ಟ ಕಾರ್ಪಣ್ಯಗಳ ಮುಕ್ತಿಗೆ ಹೆಸರುವಾಸಿಯಾದ ಇತಿಹಾಸ ಪ್ರಸಿದ್ಧ ನೆಕ್ಕಿತ್ತಡ್ಕ ಮಖಾಂ ಉರೂಸ್ ಸಮಾರಂಭವು ಮಾರ್ಚ್ 08 ಸೋಮವಾರದಂದು ಆರಂಭಗೊಂಡಿದ್ದು, ಇಂದು ಸಮಾರೋಪ ನಡೆಯಲಿದೆ.

ಅಪರಾಹ್ನ 3 ಗಂಟೆಯಿಂದ ಖತಮುಲ್ ಕುರ್ ಆನ್ ಪಾರಾಯಣ ನಡೆಯಲಿದ್ದು, ಅಸರ್‌ ನಮಾಝ್ ಬಳಿಕ ಮೌಲೀದ್ ಪಾರಾಯಣ ನಡೆಯಲಿದೆ. ಮಗ್ರಿಬ್ ನಮಾಝ್ ಬಳಿಕ ದಾಯಿರ ಕಾರ್ಯಕ್ರಮ ಹಾಗೂ 7.30 ರಿಂದ ದಫ್ ಕಾರ್ಯಕ್ರಮ ಜರಗಲಿದೆ. ದುವಾಃಗೆ ಬಹು| ಅಸ್ಸಯ್ಯಿದ್ ಮುಶ್ತಾಖುರ್ರಹ್ಮಾನ್ ತಂಙಳ್ ಚಟ್ಟೆಕ್ಕಲ್ ನೇತೃತ್ವ ನೀಡಲಿದ್ದು, ಮರ್ಧಾಳ ಬದ್ರಿಯಾ ಜುಮಾ ಮಸೀದಿಯ ಖತೀಬರಾದ ಬಹು ಅಬ್ದುಸ್ಸಲಾಂ ಮದನಿ ಪ್ರಾಸ್ತಾವಿಕ ಭಾಷಣ ಮಾಡಲಿದ್ದಾರೆ. ಬಹು| ಶೈಖುನಾ ಪೇರೋಡ್ ಅಬ್ದುರ್ರಹ್ಮಾನ್ ಸಖಾಫಿಯವರಿಂದ ಔಲಿಯಾಗಳು ಮತ್ತು ಕರಾಮತ್ ಎಂಬ ವಿಷಯದಲ್ಲಿ ಮುಖ್ಯ ಪ್ರಭಾಷಣ ಜರಗಲಿದೆ ಎಂದು ಉರೀಸ್ ಸಮಿತಿಯ ಪ್ರಕಟಣೆ ತಿಳಿಸಿದೆ.

Also Read  ಮಾತೃಶ್ರೀ ಯೋಜನೆ➤ಅಂಗನವಾಡಿ ಕೇಂದ್ರಗಳಲ್ಲಿ ಹೆಸರು ನೋಂದಣಿ ಅಭಿಯಾನ

 

error: Content is protected !!
Scroll to Top