ಮರ್ಧಾಳ ನೆಕ್ಕಿತ್ತಡ್ಕ ಮಖಾಂ ಉರೂಸ್ ಗೆ ಚಾಲನೆ ➤ ಇಂದಿನಿಂದ ಮಾರ್ಚ್ 11 ರ ವರೆಗೆ ಉರೂಸ್ ಸಮಾರಂಭ

(ನ್ಯೂಸ್ ಕಡಬ) newskadaba.com ಕಡಬ, ಮಾ.08. ವರ್ಷಂಪ್ರತಿ ನಡೆಸಿಕೊಂಡು ಬರುತ್ತಿರುವ ಮರ್ಧಾಳ ಬದ್ರಿಯಾ ಜುಮಾ ಮಸೀದಿಯ ಅಧೀನದಲ್ಲಿರುವ ಇತಿಹಾಸ ಪ್ರಸಿದ್ಧ ನೆಕ್ಕಿತ್ತಡ್ಕ ಮಖಾಂ ಉರೂಸ್ ಕಾರ್ಯಕ್ರಮವು ಇಂದಿನಿಂದ ಆರಂಭಗೊಂಡು ಮಾರ್ಚ್ 11 ರ ವರೆಗೆ ನಡೆಯಲಿದೆ.

ಇಂದು (ಮಾರ್ಚ್ 08) ನೆಕ್ಕಿತ್ತಡ್ಕ ದರ್ಗಾ ವಠಾರದಲ್ಲಿ ಉರೂಸ್ ಸಮಿತಿಯ ಅಧ್ಯಕ್ಷರಾದ ಸಾದಿಕ್ ಕೋಡಿಕಂಡ ಧ್ವಜಾರೋಹಣಗೈಯುವ ಮೂಲಕ ಉರೂಸ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮರ್ಧಾಳ ಬದ್ರಿಯಾ ಜುಮಾ ಮಸೀದಿಯ ಅಧ್ಯಕ್ಷರಾದ ಅಬೂಬಕ್ಕರ್ ಹಾಜಿ ಪಟ್ಟೆ, ಶಾಹುಲ್ ಹಮೀದ್ ತಂಙಳ್ ಮರ್ಧಾಳ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಧ್ವಜಾರೋಹಣದ ಬಳಿಕ ಜುಮಾ ಮಸೀದಿಯ ಖತೀಬರಾದ ಅಬ್ದುಸ್ಸಲಾಂ ಮದನಿಯವರಿಂದ ದುವಾಃ ನಡೆಯಿತು.

ನಾಲ್ಕು ದಿನಗಳ ಕಾಲ ಮತ ಪ್ರಭಾಷಣ ಜರಗಲಿದ್ದು, ಮಾ.08 ರಂದು ಬಹು| ಝೈನುಲ್‌ ಉಲಮಾ ಮಾಣಿ ಉಸ್ತಾದ್ ಉದ್ಘಾಟನೆ ಹಾಗೂ ಕೂಟು ಝಿಯಾರತ್ ಗೆ ನೇತೃತ್ವ ನೀಡಲಿದ್ದು, ಬಹು| ಲುಕ್ಮಾನುಲ್ ಹಕೀಂ ಸಖಾಫಿ ಪುಲ್ಲಾರ ಮುಖ್ಯ ಪ್ರಭಾಷಣಗೈಯಲಿದ್ದಾರೆ‌. ಮಾರ್ಚ್ 09 ಮಂಗಳವಾರ ರಾತ್ರಿ ಬಹು| ಹಝ್ರತ್ ಅಸ್ಸಯ್ಯಿದ್ ಅಸ್ಕರ್ ಬಿನ್ ಶಹ್ ಝಾದ್ ತಂಙಳ್ ಗಂಜಿ ಮಠ ದುವಾಃ ನೆರವೇರಿಸಲಿದ್ದು, ಬಹು| ಮುಸ್ತಫಾ ಹುದವಿ ಆಕೋಡು ಪ್ರಭಾಷಣಗೈಯಲಿದ್ದಾರೆ‌.

Also Read  ರಸ್ತೆ ಅಪಘಾತ: ಮಗು-ಚಾಲಕನಿಗೆ ಗಾಯ

ಮಾರ್ಚ್ 10 ಬುಧವಾರ ರಾತ್ರಿ ಬಹು| ಅಸ್ಸಯ್ಯಿದ್ ಕೆ.ಎಸ್.ಶಾಹುಲ್ ಹಮೀದ್ ತಂಙಳ್ ರವರ ದುವಾಃದೊಂದಿಗೆ ಬಹು| ಪೇರೋಡ್ ಮುಹಮ್ಮದ್ ಅಝ್ಹರಿ ಪ್ರಭಾಷಣಗೈಯಲಿದ್ದಾರೆ‌. ಮಾರ್ಚ್ 11 ಗುರುವಾರ ರಾತ್ರಿ ಸಮಾರೋಪ ಸಮಾರಂಭ ನಡೆಯಲಿದ್ದು, ಬಹು| ಅಸ್ಸಯ್ಯಿದ್ ಮುಶ್ತಾಖುರ್ರಹ್ಮಾನ್ ತಂಙಳ್ ಚಟ್ಟೆಕ್ಕಲ್ ದುವಾಃ ನೆರವೇರಿಸಲಿದ್ದಾರೆ. ಬಹು| ಅಬ್ದುಸ್ಸಲಾಂ ಮದನಿ ಪ್ರಾಸ್ತಾವಿಕ ಭಾಷಣ ಮಾಡಲಿದ್ದು, ಬಹು| ಶೈಖುನಾ ಪೇರೋಡ್ ಅಬ್ದುರ್ರಹ್ಮಾನ್ ಸಖಾಫಿ ಮುಖ್ಯ ಭಾಷಣಗೈಯಲಿದ್ದಾರೆ ಎಂದು ಉರೂಸ್‌ ಸಮಿತಿಯ ಪ್ರಕಟಣೆ ತಿಳಿಸಿದೆ.

Also Read  ಅಂತರಾಷ್ಟ್ರೀಯ ಮಟ್ಟದ ‘ಕರಾಟೆ ಚಾಂಪಿಯನ್‍ಶಿಪ್- 2024’: ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಶಮಿರಾಜ್ ಆಳ್ವಗೆ ಬೆಳ್ಳಿಯ ಪದಕ

 

error: Content is protected !!
Scroll to Top