ಕಡಬ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ➤ ಅದ್ದೂರಿ ಮೆರವಣಿಗೆ, ಧ್ವಜಾರೋಹಣ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಫೆ‌.24. ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಕಡಬ ತಾಲೂಕಿನ 2ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವು ಸುಬ್ರಹ್ಮಣ್ಯ ವಲ್ಲೀಶ ಸಭಾಭವನದ ದಿ.ಪಟೇಲ್ ಕೂಜುಗೋಡು ನಾಗಪ್ಪ ಗೌಡ ವೇದಿಕೆಯಲ್ಲಿ ನಡೆಯುತ್ತಿದ್ದು, ಸಮ್ಮೇಳನಾಧ್ಯಕ್ಷ ಕೇಶವ ಭಟ್ ಅವರನ್ನು ಅದ್ಧೂರಿ ಮೆರವಣಿಗೆಯಲ್ಲಿ ಕರೆತರಲಾಯಿತು.

ಬಳಿಕ ರಾಷ್ಟ್ರಧ್ವಜವನ್ನು ಕಡಬ ತಾಲೂಕು ಪಂಚಾಯತ್ ಅಧ್ಯಕ್ಷೆ ರಾಜೇಶ್ವರಿ ಕನ್ಯಾಮಂಗಲ ಆರೋಹಣ ಮಾಡಿದರು. ಪರಿಷತ್ ಧ್ವಜವನ್ನು ಪ್ರದೀಪ್ ಕುಮಾರ ಕಲ್ಕೂರ ಹಾಗೂ ಸಮ್ಮೇಳನ ಧ್ವಜವನ್ನು ಜನಾರ್ದನ ಗೌಡ ಪಣೆಮಜಲು ಆರೋಹಣ ಮಾಡಿದರು.

Scroll to Top