ಶಾಲೆಗೆಂದು ತೆರಳಿದ ಬಾಲಕಿ ದಾರುಣ ಅಂತ್ಯ➤ ಶಾಲಾರಂಭದ ದಿನವೇ ನಡೆಯಿತು ಮನಕಲಕುವ ಘಟನೆ

(ನ್ಯೂಸ್ ಕಡಬ) newskadaba.com ಪುತ್ತೂರು, ಜ.01. ಶಾಲೆಗೆಂದು ಮನೆಯಿಂದ ತೆರಳಿದ ಬಾಲಕಿಯೋರ್ವಳು ಮನೆ ಸಮೀಪದ ಗೇರು ತೋಪಿನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆ ಶಾಲೆ ಆರಂಭದ ಮೊದಲ ದಿನವೇ ಪುತ್ತೂರಿನಲ್ಲಿ ನಡೆದಿದೆ.

ಆತ್ಮಹತ್ಯೆಗೈದ ಬಾಲಕಿಯನ್ನು ಪುತ್ತೂರಿನ ಕೆಯ್ಯೂರು ಕರ್ನಾಟಕ ಪಬ್ಲಿಕ್ ಸ್ಕೂಲ್ ನ 9ನೇ ತರಗತಿಯ ವಿದ್ಯಾರ್ಥಿನಿ, ಮಾಡಾವು ನಿವಾಸಿ ರಾಮ ಎಂಬವರ ಪುತ್ರಿ ದಿವ್ಯಾ ಎಂದು ಗುರುತಿಸಲಾಗಿದೆ. ಕೊರೋನಾ ಹಿನ್ನೆಲೆಯಲ್ಲಿ ಬಂದ್ ಆಗಿದ್ದ ಶಾಲೆಯು ಶುಕ್ರವಾರದಂದು ರಾಜ್ಯಾದ್ಯಂತ ಆರಂಭಗೊಂಡಿದ್ದು, ದಿವ್ಯಾ ಶಾಲೆಗೆ ಹೋಗುವುದಾಗಿ ಹೇಳಿ ಮನೆಯಿಂದ ಹೊರಟಿದ್ದಾಳೆ. ಮನೆಯ ಪಕ್ಕದ ಗೇರು ತೋಪಿನ ಮರವೊಂದಕ್ಕೆ ಶಾಲಾ ಸಮವಸ್ತ್ರದ ವೇಲ್ ನ್ನು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಘಟನೆಗೆ ಕಾರಣ ಪೊಲೀಸ್ ತನಿಖೆಯಿಂದಷ್ಟೇ ತಿಳಿದುಬರಬೇಕಿದೆ.

error: Content is protected !!

Join the Group

Join WhatsApp Group