ಪುತ್ತೂರು: ಚುನಾವಣಾಧಿಕಾರಿಯಿಂದ ಮತಗಟ್ಟೆಗಳ ಭೇಟಿ ➤ ಅಭ್ಯರ್ಥಿಗಳ ಚಿಹ್ನೆ ಇರುವ ಪತ್ರ ಹಂಚಿಕೆ ಪತ್ತೆ

(ನ್ಯೂಸ್ ಕಡಬ) newskadaba.com ಪುತ್ತೂರು, ಡಿ.27:ಇಲ್ಲಿನ ಹಂಟ್ಯಾರು ಶಾಲಾ ಮತಗಟ್ಟೆಯ ವಠಾರದಲ್ಲಿ ಅಭ್ಯರ್ಥಿಗಳ ಚಿಹ್ನೆಯ‌ ಪತ್ರ ಹಂಚುತ್ತಿರುವುದು ಪತ್ತೆಯಾಗಿದೆ.

ಚುನಾವಣಾಧಿಕಾರಿ ಡಾ.ಯತೀಶ್ ಉಳ್ಳಾಲ್ ಗ್ರಾಮ ಪಂಚಾಯತ್ ಚುನಾವಣೆಯ ಮತಗಟ್ಟೆಗಳನ್ನು ಭೇಟಿ ಮಾಡಿ ಪರಿಶೀಲನೆ ನಡೆಸುತ್ತಿದ್ದಾಗ ಮತದಾರರೊಬ್ಬರ ಕೈಯಲ್ಲಿದ್ದ ಚೀಟಿ ನೋಡಿದ ವೇಳೆ ಪ್ರಕರಣ ಬೆಳಕಿಗೆ ಬಂದಿದೆ.
ಚೀಟಿಯ ಬಗ್ಗೆವ್ಯಕ್ತಿಯನ್ನು ವಿಚಾರಿಸಿ ಬೂತ್ ಗೆ ದಾಳಿ ಮಾಡಿದಾಗ ಟೇಬಲ್ ನ ಅಡಿಯಲ್ಲಿ ಪಕ್ಷದ ಚಿಹ್ನೆ ಇರುವ ಅಭ್ಯರ್ಥಿಯ ಚೀಟಿನ ಒಂದು ಕಟ್ಟು ಪತ್ತೆಯಾಗಿದೆ.ಈ ಸಂಬಂಧ ಕಾನೂನು ಕ್ರಮ ಜರಗಿಸುವಂತೆ ಮತಗಟ್ಟೆಯ ಪರಿಶೀಲನಾಧಿಕಾರಿಗೆ ಸೂಚನೆ ನೀಡಿದ್ದಾರೆ. ಇದೆ ವೇಳೆ ಅಭ್ಯರ್ಥಿಯೋರ್ವ ಮತದಾರರಿಗೆ ಚೀಟಿ ಕೊಡುತ್ತಿರುವುದನ್ನು ಸಹ ಸಹಾಯಕ ಕಮೀಷನರ್ ಪತ್ತೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

 

 

error: Content is protected !!

Join the Group

Join WhatsApp Group