ಕೊರೋನಾ ಸೋಂಕಿನಿಂದ ಶಿರಸಿ ವೈದ್ಯ ಮೃತ್ಯು

(ನ್ಯೂಸ್ ಕಡಬ) newskadaba.com ಶಿರಸಿ, ಸೆ.13:  ಪಂಡಿತ್ ಸಾರ್ವಜನಿಕ ಆಸ್ಪತ್ರೆಯ ವೈದ್ಯ, ಅರವಳಿಕೆ ತಜ್ಞರಾಗಿದ್ದ 61 ವರುಷ ಪ್ರಾಯದ  ಡಾ ಬಸವನಗೌಡರು ಕೊರೋನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ.

 

ದಾವಣಗೆರೆ ಮೂಲದವರಾದ ಬಸವನಗೌಡ ಅವರಿಗೆ ಅಗಸ್ಟ್ 25 ರಂದು ಕೊರೊನಾ ಸೋಂಕು ದೃಢವಾಗಿತ್ತು. ನಂತರ ಚಿಕಿತ್ಸೆಗಾಗಿ ಅವರು ದಾವಣಗೆರೆ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಕಳೆದೆರಡು ದಿನಗಳಿಂದ ವೆಂಟಿಲೇಟರ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು, ಭಾನುವಾರ ಬೆಳಗಿನ ಜಾವ ಕೊನೆಯುಸಿರೆಳೆದಿದ್ದಾರೆ.ವೈದ್ಯರ ಸಾವಿಗೆ ಶಿರಸಿ ತಾಲೂಕಿನ ಜನತೆ ಕಂಬನಿ ಮಿಡಿದಿದ್ದಾರೆ.

 

error: Content is protected !!

Join the Group

Join WhatsApp Group