ಕಡಬದ ಎಂ.ಜೆ. ವೆಜಿಟೆಬಲ್ಸ್ ನಲ್ಲಿ ವಿಶೇಷ ದರ ಕಡಿತ ಮಾರಾಟ ➤ ಈರುಳ್ಳಿ, ಟೊಮ್ಯಾಟೊ ಪ್ರತೀ ಕೆಜಿಗೆ 10 ರೂ. ಮಾತ್ರ

(ನ್ಯೂಸ್ ಕಡಬ) newskadaba.com ಕಡಬ, ಮೇ.02. ಕೊರೋನಾ ಮಹಾಮಾರಿಯಿಂದಾಗಿರುವ ಲಾಕ್‌ಡೌನ್ ನಿಂದ ಕಂಗೆಟ್ಟಿರುವ ಕಡಬದ ಜನತೆಗೆ ತರಕಾರಿ ಖರೀದಿಗೆ ಸುವರ್ಣಾವಕಾಶವೊಂದಿದ್ದು, ಕಡಬದ ಬಸ್ ನಿಲ್ದಾಣದ ಮುಂಭಾಗದ ಶ್ರೀದೇವಿ ಇಲೆಕ್ಟ್ರಾನಿಕ್ಸ್ ಪಕ್ಕದಲ್ಲಿ ಕಾರ್ಯಾಚರಿಸುತ್ತಿರುವ ಎಂ.ಜೆ. ತರಕಾರಿ ಮತ್ತು ಹಣ್ಣುಹಂಪಲು ಮಳಿಗೆಯಲ್ಲಿ ವಿಶೇಷ ದರಕಡಿತ ಮಾರಾಟ ಏರ್ಪಡಿಸಲಾಗಿದೆ.

ಟೊಮ್ಯಾಟೊ, ಈರುಳ್ಳಿ (ದೊಡ್ಡದು) ಕ್ಯಾಬೇಜ್, ಕಿಲೋವೊಂದಕ್ಕೆ 10 ರೂ., ಬೀಟ್ರೋಟ್, ಸೌತೆಕಾಯಿ, ಮುಳ್ಳುಸೌತೆ, ಬದನೆಕಾಯಿ, ಸಿಹಿ ಗೆಣಸು, ಕಿಲೋಗೆ 15 ರೂ., ಮೂಲಂಗಿ, ಕೇನೆ, ಹೂಕೋಸು, ಮರಗೆಣಸು, ತೊಂಡೆಕಾಯಿ ಪ್ರತೀ ಕೆಜಿಗೆ 20 ರೂ., ಬಟಾಟೆ, ಸೂರೆಕಾಯಿ ಪ್ರತೀ ಕಿಲೋಗೆ 25 ರೂ., ಬೆಂಡೆಕಾಯಿ, ಕ್ಯಾರೆಟ್ 30 ರೂ., ನುಗ್ಗೆಕಾಯಿ, ಅಲಸಂಡೆ 35 ರೂ., ಕಾಯಿಮೆಣಸು, ಹೀರೆಕಾಯಿ, ಬೀನ್ಸ್, ಬಜ್ಜಿ ಮೆಣಸು, ದೊಣ್ಣೆ ಮೆಣಸು 40 ರೂ., ಬೆಳ್ಳುಳ್ಳಿ ಕಿಲೋವೊಂದಕ್ಕೆ 100 ರೂ. ಹಾಗೂ ಇನ್ನಿತರ ತರಕಾರಿಗಳು, ಹಣ್ಣು ಹಂಪಲುಗಳಿಗೆ ವಿಶೇಷ ದರ ಕಡಿತ ಇರಲಿದೆ. ಗ್ರಾಹಕರು ಕಡ್ಡಾಯವಾಗಿ ಮಾಸ್ಕ್ ಧರಿಸಿ ಆಗಮಿಸಬೇಕಾಗಿದ್ದು, ಹೆಚ್ಚಿನ ಮಾಹಿತಿಗಾಗಿ 9844193047 ಸಂಖ್ಯೆಯನ್ನು ಸಂಪರ್ಕಿಸುವಂತೆ ಮಳಿಗೆಯ ಮಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Also Read  ಪೊಲೀಸರ ಕರ್ತವ್ಯಕ್ಕೆ ಅಡ್ಡಿ, ಚೆಕ್ ಪೋಸ್ಟ್ ಧ್ವಂಸ ➤ 15 ಮಂದಿಯ ವಿರುದ್ಧ ಪ್ರಕರಣ ದಾಖಲು

error: Content is protected !!
Scroll to Top