ಅಂಚೆ ಇಲಾಖೆ ಪತ್ರ ಬರಹ ಸ್ಪರ್ಧೆ : ಅವಧಿ ವಿಸ್ತರಣೆ

 (ನ್ಯೂಸ್ ಕಡಬ) newskadaba.com, ಮಂಗಳೂರು , ನ.30. ಭಾರತೀಯ ಅಂಚೆ ಇಲಾಖೆಯು ರಾಷ್ಟ್ರೀಯ ಮಟ್ಟದಲ್ಲಿ ‘ಪ್ರೀತಿಯ ಬಾಪು ನೀವು ಅಮರ’ ಶೀರ್ಷಿಕೆಯಲ್ಲಿ ಏರ್ಪಡಿಸಿದ್ದ ಪತ್ರ ಬರಹ ಸ್ಪರ್ಧೆಯ ಲೇಖನವನ್ನು ಸ್ವೀಕರಿಸುವ ದಿನವನ್ನು ಡಿಸೆಂಬರ್ 31 ರವರೆಗೆ ಮುಂದೂಡಲಾಗಿದೆ.

ಸ್ಪರ್ಧೆಯು 01.01.2019 ಗೆ ಅನ್ವಯವಾಗುವ ಹಾಗೆ 18 ವರ್ಷದ ಒಳಗಡೆ ವಯಸ್ಸಿನವರ ಹಾಗೂ 18 ವರ್ಷ ಮೇಲಿನ ವಯಸ್ಸಿನವರ 2 ವಿಭಾಗಗಳನ್ನು ಒಳಗೊಂಡಿರುತ್ತದೆ. ಇನ್ ಲ್ಯಾಂಡ್ ಕಾರ್ಡ್ ಉಪಯೋಗಿಸಿ (500 ಪದಗಳು ಮೀರದ ಹಾಗೆ), ಅಥವಾ ಎನ್ವಲಪ್ ನಲ್ಲಿ (ಲಕೋಟೆ A4 ಸೈಝ್ ಕಾಗದ, 1000 ಪದಗಳು ಮೀರದ ಹಾಗೆ) ಪತ್ರವನ್ನು ಹಿರಿಯ ಅಂಚೆ ಅಧೀಕ್ಷಕರು, ಮಂಗಳೂರು ವಿಭಾಗ, ಮಂಗಳೂರು -575002 ವಿಳಾಸಕ್ಕೆ ಕಳುಹಿಸಬೇಕು. ಕಳುಹಿಸುವವರ ವಿಳಾಸವು ಕಡ್ದಾಯವಾಗಿದ್ದು ಶೀರ್ಷಿಕೆ ”Entry for Dhai Akar 2019-20” ಎಂದು ಲಕೋಟೆಯ ಮೇಲೆ ನಮೂದಿಸಬೇಕು. ಇಂಗ್ಲೀಷ್ /ಹಿಂದಿ/ ಯಾವುದೇ ಸ್ಥಳೀಯ ಭಾಷೆಯಲ್ಲಿ ಲೇಖನವನ್ನು ಬರೆಯಬಹುದು. ರಾಜ್ಯಮಟ್ಟದ ವಿಭಾಗದಲ್ಲಿ ಪ್ರಥಮ ಬಹುಮಾನ ರೂ.25000, ದ್ವಿತೀಯ ಬಹುಮಾನ ರೂ. 10000, ತೃತೀಯ ಬಹುಮಾನ ರೂ. 5000 ಹಾಗೂ ರಾಷ್ಟ್ರ ಮಟ್ಟದಲ್ಲಿ ಪ್ರಥಮ ಬಹುಮಾನ ರೂ. 50000, ದ್ವಿತೀಯ ಬಹುಮಾನ ರೂ.25000, ತೃತೀಯ ಬಹುಮಾನ ರೂ.10000 ಒಳಗೊಂಡಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಸಮೀಪದ ಅಂಚೆ ಕಚೇರಿ ಅಥವಾ ವೆಬ್‍ಸೈಟ್‍ www.indiapost.gov.in  ಸಂಪರ್ಕಿಸಬೇಕು ಎಂದು ಹಿರಿಯ ಅ0ಚೆ ಅಧೀಕ್ಷಕರು, ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.

error: Content is protected !!

Join the Group

Join WhatsApp Group