‘ನೋ ಹೆಲ್ಮೆಟ್ ನೋ ಪೆಟ್ರೋಲ್’ ➤ ಜಾಗೃತಿ ಆಂದೋಲನಕ್ಕೆ ಸಂಚಾರ ಪೊಲೀಸರ ಚಿಂತನೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಆಗಸ್ಟ್.6.ದ್ವಿಚಕ್ರ ವಾಹನಗಳಿಂದ ಆಗುವ ಅನಾಹುತಗಳನ್ನು ತಪ್ಪಿಸುವುದಕ್ಕೆ ನಗರದಲ್ಲಿಯೂ ಸಂಚಾರಿ ಪೊಲೀಸರು ಹೊಸ ಚಿಂತನೆಯೊಂದನ್ನು ನಡೆಸಿದೆ.

‘ಹೆಲ್ಮೆಟ್ ಧರಿಸಿ ಬಂದರಷ್ಟೇ ಬಂಕ್‌ಗಳಲ್ಲಿ ಪೆಟ್ರೋಲ್’ ಎನ್ನುವ ಒಂದು ಹೊಸ ನಿಯಮವು ದ್ವಿಚಕ್ರ ವಾಹನ ಸವಾರರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಈ ಆಂದೋಲನವನ್ನು ಪ್ರಾರಂಭಿಸುವುದಕ್ಕೆ ಸಂಚಾರಿ ಪೊಲೀಸರು ಚಿಂತನೆ ನಡೆಸುತ್ತಿದ್ದಾರೆ.ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಹಾಕದೆ ವಾಹನ ಚಲಾಯಿಸಿ ಅಪಘಾತಗಳಾಗಿ ಸಾವು-ನೋವು ಸಂಭವಿಸುವ ಪ್ರಕರಣಗಳು ಹೆಚ್ಚಾಗುತ್ತಿವೆ. ಇದೇ ಕಾರಣಕ್ಕೆ ಬೆಂಗಳೂರಿನ ಕೆಲವು ಪೆಟ್ರೋಲ್ ಬಂಕ್‌ಗಳಲ್ಲಿ ಸುರಕ್ಷತೆಯ ಉದ್ದೇಶದಿಂದ ಈಗಾಗಲೇ ದ್ವಿಚಕ್ರ ವಾಹನಗಳ ಸವಾರರು ಹೆಲ್ಮೆಟ್ ಹಾಕಿದರೆ ಮಾತ್ರ ಪೆಟ್ರೋಲ್ ಎಂಬ ಜಾಗೃತಿ ಕಾರ್ಯವನ್ನು ಸಂಚಾರಿ ಪೊಲೀಸರು ಕೈಗೆತ್ತಿಗೊಂಡಿದ್ದಾರೆ.

ಅದಕ್ಕೆ ಉತ್ತಮ ಜನಮನ್ನಣೆ ಲಭಿಸಿದೆ.ಈಗ ಈ ನಿಯಮವನ್ನು ನಗರದಲ್ಲಿಯೂ ಅಳವಡಿಸಲು ಸಂಚಾರಿ ಪೊಲೀಸ್‌ ಇಲಾಖೆಯು ಚಿಂತಿಸುತ್ತಿದೆ.ಅದಕ್ಕೆ ಸಾಥ್‌ ನೀಡಲು ದ.ಕ. ಮತ್ತು ಉಡುಪಿ ಪೆಟ್ರೋಲ್ ಮಾಲಕರ ಸಂಘ ಕೂಡ ಉತ್ಸುಕದಲ್ಲಿದೆ.ಈಗಾಗಲೇ ಕೇರಳ, ಆಂಧ್ರಪ್ರದೇಶ ಸಹಿತ ಕೆಲವೊಂದು ರಾಜ್ಯಗಳಲ್ಲಿ ಮತ್ತು ಬೆಂಗಳೂರುನಲ್ಲಿ ಈ ನಿಯಮ ಜಾರಿಯಲ್ಲಿವೆ. ಇದರ ಪ್ರಕಾರ ನಿಮ್ಮ ದ್ವಿಚಕ್ರ ವಾಹನಗಳಿಗೆ ಪೆಟ್ರೋಲ್ ಹಾಕಬೇಕು ಅಂದರೆ ಹೆಲ್ಮೆಟ್ ಇರಲೆಬೇಕು. ಹೆಲ್ಮೆಟ್ ಇಲ್ಲದಿದ್ದರೆ ಬಂಕ್‌ ಸಿಬಂದಿ ಪೆಟ್ರೋಲ್ ಹಾಕುವುದಿಲ್ಲ.

 

error: Content is protected !!

Join the Group

Join WhatsApp Group