ನಾಳೆ(ಮೇ.22) ನೆಕ್ಕಿತ್ತಡ್ಕದಲ್ಲಿ ಶುದ್ಧ ತೆಂಗಿನೆಣ್ಣೆ ತಯಾರಿ ಘಟಕ ಶುಭಾರಂಭ ➤ ನೂತನ ತಂತ್ರಜ್ಞಾನದ ಆಯಿಲ್ & ಫ್ಲೋರ್ ಮಿಲ್

(ನ್ಯೂಸ್ ಕಡಬ) newskadaba.com ಕಡಬ, ಮೇ.20. ತಾಲೂಕು ಕೇಂದ್ರವಾಗಿರುವ ಕಡಬದಲ್ಲಿ ದಿನನಿತ್ಯ ಹೊಸ ಹೊಸ ಸಂಸ್ಥೆಗಳು ತಲೆ ಎತ್ತುತ್ತಿದ್ದು, ಆ ಸರದಿಗೆ ಇನ್ನೊಂದು ಸಂಸ್ಥೆ ಸೇರ್ಪಡೆಗೊಳ್ಳುತ್ತಿದೆ.

ಶುದ್ಧ ಕೊಬ್ಬರಿ ಎಣ್ಣೆ ಹಾಗೂ ಅಕ್ಕಿ, ಗೋಧಿ ಹುಡಿ ಮಾಡುವ ನೂತನ ಘಟಕ ‘ಮಣಿಮಲ ಮಿಲ್ ಇಂಡಸ್ಟ್ರೀಸ್’ ಮೇ.22 ಬುಧವಾರದಂದು ಕಡಬ – ಮರ್ಧಾಳ ನಡುವಿನ ನೆಕ್ಕಿತ್ತಡ್ಕ ಬಸ್ ನಿಲ್ದಾಣದ ಮುಂಭಾಗದಲ್ಲಿ ಶುಭಾರಂಭಗೊಳ್ಳಲಿದೆ. ಸಂಸ್ಥೆಯಲ್ಲಿ ನೂತನ ತಂತ್ರಜ್ಞಾನದೊಂದಿಗೆ ಕೊಬ್ಬರಿಯನ್ನು ಎಣ್ಣೆ ಮಾಡಿಕೊಡಲಾಗುವುದು. ಅಕ್ಕಿ, ಗೋಧಿ, ರಾಗಿ, ಅರಿಶಿನ, ಕೊತ್ತಂಬರಿ, ಮೆಣಸು ಮೊದಲಾದ ಸಾಂಬಾರ್ ವಸ್ತುಗಳನ್ನು ಹುಡಿ ಮಾಡಿಕೊಡಲಾಗುವುದು ಅಲ್ಲದೆ ಶುದ್ಧ ತೆಂಗಿನ ಎಣ್ಣೆ ಹಾಗೂ ಮಸಾಲ ಹುಡಿಗಳನ್ನು ಮಾರಾಟ ಮಾಡಲಾಗುವುದು. ತೆಂಗಿನಕಾಯಿಗಳನ್ನು ಹಾಗೂ ಕೊಬ್ಬರಿಗಳನ್ನು ಉತ್ತಮ ದರದಲ್ಲಿ ಖರೀದಿಸಲಾಗುವುದಲ್ಲದೆ ದರದಲ್ಲಿ ಕಚ್ಛಾವಸ್ತುಗಳನ್ನು ಒಣಗಿಸುವ ವ್ಯವಸ್ಥೆಯನ್ನೂ ಸಹ ಕಲ್ಪಿಸಲಾಗಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ 9741947192 ಅಥವಾ 7338091924 ಸಂಖ್ಯೆಯನ್ನು ಸಂಪರ್ಕಿಸುವಂತೆ ಕೋರಲಾಗಿದೆ.

Also Read  'ಕ್ಯಾರ್' ಚಂಡಮಾರುತದ ಬೆನ್ನಲ್ಲೇ 'ಮಹಾ' ಚಂಡಮಾರುತ ➤ ಆತಂಕದಲ್ಲಿ ಕರಾವಳಿ ಜನತೆ

error: Content is protected !!
Scroll to Top