ರಾಜ್ಯ ಬಿಜೆಪಿ ಕಾರ್ಯದರ್ಶಿ ಮನು ಮುತ್ತಪ್ಪನ್ ಕೈಕಂಬಕ್ಕೆ ಭೇಟಿ

(ನ್ಯೂಸ್ ಕಡಬ) newskadaba.com ಕಡಬ, ಆ.03. ರಾಜ್ಯ ಬಿಜೆಪಿ ಕಾರ್ಯದರ್ಶಿ ಮನು ಮುತ್ತಪ್ಪನ್ ವಿಸ್ತಾರಕರಾಗಿ ಕಡಬ ಶಕ್ತಿ ಕೇಂದ್ರದ ಕೈಕಂಬ ಬೂತ್ ಸಮಿತಿಗೆ ಇತ್ತೀಚೆಗೆ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಕಡಬ ಶಕ್ತಿ ಕೇಂದ್ರ ಅಧ್ಯಕ್ಷ ವಾಡ್ಯಪ್ಪ ಗೌಡ ಎರ್ಮಾಯಿಲ್, ಬಿಳಿನೆಲೆ ತಾ.ಪಂ.ಮಾಜಿ ಸದಸ್ಯೆ ಸರೋಜಿನಿ ಜಯಪ್ರಕಾಶ್, ಕಡಬ ಶಕ್ತಿ ಕೇಂದ್ರದ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ರಮೇಶ್ ವಾಲ್ತಾಜೆ, ಬಿಳಿನೆಲೆ ಬಿಜೆಪಿ ಗ್ರಾಮ ಸಮಿತಿ ಅಧ್ಯಕ್ಷ ರಘು ಚೆಂಡೆಹಿತ್ಲು, ಬಿಳಿನೆಲೆ ಸಿ.ಎ.ಬ್ಯಾಂಕ್ ಅಧ್ಯಕ್ಷ ಬಾಲಕೃಷ್ಣ ಗೌಡ ವಿ., ಪ್ರಮುಖರಾದ ಮೋಹನ ಪಳ್ಳಿಗದ್ದೆ, ತಿಲೇಶ್ ಕುಳಪ್ಪಾಡಿ, ಮೋಹನ ಕಳಿಗೆ, ಶಿವಪ್ರಸಾದ್ ಎನ್., ಶಾರದ ಕುಕ್ಕಾಜೆ, ಶೇಷಪ್ಪ ಗೌಡ ಕೋಟೆಬಾಗಿಲು, ಬಾಬು ಎಸ್.ಪಿ., ಸತೀಶ್ ಎರ್ಕ, ದಿನೇಶ್ ಬೈಲು ಉಪಸ್ಥಿತರಿದ್ದರು.

error: Content is protected !!

Join the Group

Join WhatsApp Group