ಕೊಯಿಲ: ನೀರಿಗೆ ಬಿದ್ದು ಯುವತಿ ಮೃತ್ಯು ➤ ಮದುವೆ ನಿಶ್ಚಿತಾರ್ಥವಾಗಿ ಅತಿಥಿ ಸತ್ಕಾರಕ್ಕೆ ಬಂದಿದ್ದ ವೇಳೆ ಘಟನೆ

(ನ್ಯೂಸ್ ಕಡಬ) newskadaba.com ಕಡಬ, ಮಾ.25. ನದಿ ತೀರಕ್ಕೆ ತೆರಳಿದ ಯುವತಿಯೋರ್ವಳು ಆಕಸ್ಮಿಕವಾಗಿ ನೀರಿಗೆ ಬಿದ್ದು ಮೃತಪಟ್ಟ ಘಟನೆ ಸೋಮವಾರ ಸಂಜೆ ಕಡಬ ಠಾಣಾ ವ್ಯಾಪ್ತಿಯ ಕೊಯಿಲದಲ್ಲಿ ನಡೆದಿದೆ.

ಮೃತ ಯುವತಿಯನ್ನು ಸಕಲೇಶಪುರ ತಾಲೂಕಿನ ಬಾಳೆಗೇರಿ ನಿವಾಸಿ ಕುಮಾರ – ಹೊನ್ನಮ್ಮ ದಂಪತಿಯ ಪುತ್ರಿ ದಿವ್ಯಾ(19) ಎಂದು ಗುರುತಿಸಲಾಗಿದೆ. ಈಕೆಗೆ ಮದುವೆ ನಿಶ್ಚಿತಾರ್ಥವಾಗಿದ್ದು, ಈ ಹಿನ್ನೆಲೆಯಲ್ಲಿ ಅತಿಥಿ ಸತ್ಕಾರಕ್ಕಾಗಿ ಕೊಯಿಲ ಗ್ರಾಮದ ವಳಕಡಮದಲ್ಲಿರುವ ತನ್ನ ದೊಡ್ಡಮ್ಮನ ಮನೆಗೆ ಆಗಮಿಸಿದ್ದಳು. ಸೋಮವಾರ ಸಂಜೆ ಮನೆ ಸಮೀಪದ ನದಿಯಲ್ಲಿ ಸ್ನಾನಕ್ಕೆಂದು ತೆರಳಿ ಹಿಂದಿರುಗಿದ್ದು, ಆ ಬಳಿಕ ಕೈಕಾಲು ತೊಳೆಯಲೆಂದು ನದಿ ತೀರಕ್ಕೆ ತೆರಳಿದಾಗ ಆಕಸ್ಮಿಕವಾಗಿ ನೀರಿಗೆ ಬಿದ್ದು ಮೃತಪಟ್ಟಿದ್ದಾಳೆ ಎನ್ನಲಾಗಿದೆ. ಸ್ಥಳಕ್ಕೆ ಕಡಬ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಬಗ್ಗೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ತುಳು ಭಾಷೆಗೆ ಮಾನ್ಯತೆ ಕೊಡಲು ಸರ್ಕಾರವನ್ನು ಒತ್ತಾಯಿಸುವಂತೆ ಡಾ.ವೀರೆಂದ್ರ ಹೆಗ್ಗಡೆಗೆ ಮನವಿ

error: Content is protected !!
Scroll to Top