ಕಡಬ: ಬೆಳ್ಳಂಬೆಳಗ್ಗೆ ನೇಣು ಬಿಗಿದು ಯುವಕ ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಕಡಬ, ಜ. 28. ಯುವಕನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ಬೆಳಗ್ಗೆ ಠಾಣಾ ವ್ಯಾಪ್ತಿಯ ಐತ್ತೂರು ಗ್ರಾಮದ ಬೆತ್ತೋಡಿಯಲ್ಲಿ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು ಬೆತ್ತೋಡಿ ಸಮೀಪದ ಸುಳ್ಯ ನಿವಾಸಿ ದಿ| ಕುಶಾಲಪ್ಪ ಗೌಡ ಎಂಬವರ ಪುತ್ರ ಅಶ್ವಥ್(27) ಎಂದು ಗುರುತಿಸಲಾಗಿದೆ. ಮಂಗಳೂರಿನಲ್ಲಿ ಲಾರಿ ಚಾಲಕನಾಗಿದ್ದ ಈತ ಶನಿವಾರದಂದು ತನ್ನ ಮನೆಗೆ ಬಂದಿದ್ದು, ಸೋಮವಾರ ಮುಂಜಾನೆ ತನ್ನ ಕೊಠಡಿಯ ಮೇಲ್ಛಾವಣಿಗೆ ನೇಣುಬಿಗಿದು‌ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತದೇಹವನ್ನು ಕಡಬ ಸಮುದಾಯ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಆತ್ಮಹತ್ಯೆಗೆ ನಿಖರ ಕಾರಣ ಇನ್ನಷ್ಟೇ ತಿಳಿದು ಬರಬೇಕಿದೆ.

Also Read  ಕರ್ನಾಟಕದ ಕೈ ತಪ್ಪಿದ ಕೆಎಸ್ಸಾರ್ಟಿಸಿ ➤ ಇನ್ಮುಂದೆ KSRTC ಕೇರಳದ ಸ್ವತ್ತು

error: Content is protected !!
Scroll to Top