ಕೊೈಲ :ಸೌಹಾರ್ದ ವೇದಿಕೆ ಪೂರ್ವ ಅಧ್ಯಕ್ಷ ಹೈದರ್ ಕೊೈಲ ನಿಧನ

(ನ್ಯೂಸ್ ಕಡಬ) newskadaba.com.ಉಪ್ಪಿನಂಗಡಿ,  ಜ.09. ಉಪ್ಪಿನಂಗಡಿ: ಕೊೈಲ ನಿವಾಸಿ, ದಿವಂಗತ ಇಬ್ರಾಹಿಂ ಎಂಬವರ ಪುತ್ರ, ಹೈದರ್ ಕೊೈಲ (37 ವ.) ಕೆಲ ದಿನಗಳ ಹಿಂದೆ ಅನಾರೋಗ್ಯದಿಂದ ಬಳಲುತ್ತಿದ್ದರು. ಜ. 8ರಂದು ತನ್ನ ಮನೆಯಲ್ಲಿ ನಿಧನ ಹೊಂದಿದರು.

ಕೊೈಲದಲ್ಲಿ ಅಟೋ ಚಾಲಕರಾಗಿದ್ದ ಹೈದರ್ ಕೊೈಲ ಸೌಹಾರ್ದ ವೇದಿಕೆ ಕೊೈಲ ಇದರ ಅಧ್ಯಕ್ಷರಾಗಿ, ನೂರುಲ್ ಹುದಾ ಮದ್ರಸ ನೀರಾಜೆ ಹಾಗೂ ಯಂಗ್‍ಮೆನ್ಸ್ ಸಂಸ್ಥೆಯಲ್ಲಿ ಸಕ್ರೀಯರಾಗಿ ತನ್ನ ಸಾಮಾಜಿಕ ಕಳಕಳಿಯ ಸೇವೆಯಿಂದ ಸಕ್ರೀಯರಾಗಿ ಚಿರಪರಿಚಿತರಾಗಿದ್ದರು.ಮೃತರು ಪತ್ನಿ ಬುಶ್ರಾ, ಪುತ್ರಿಯರಾದ ಅಫೀಝ, ಅಫ್ರೀನ್‍ರನ್ನು ಅಗಲಿದ್ದಾರೆ.

Also Read  ಮಿತ್ತಕೋಡಿ: ದ್ವಿಚಕ್ರ ವಾಹನಕ್ಕೆ ಲಾರಿ ಢಿಕ್ಕಿ ► ಮದುವೆಗೆಂದು ಶಾಪಿಂಗ್ ಮುಗಿಸಿ ಪತಿಯೊಂದಿಗೆ ಬರುತ್ತಿದ್ದ ಪತ್ನಿ ಮೃತ್ಯು, ಪತಿ ಗಂಭೀರ

error: Content is protected !!
Scroll to Top