ಶ್ರೀ.ಕ್ಷೇ.ಧ.ಗ್ರಾ.ಯೋ. ಬಿಳಿನೆಲೆ ವಲಯದ ವತಿಯಿಂದ ವನ ಮಹೋತ್ಸವ

(ನ್ಯೂಸ್ ಕಡಬ) newskadaba.com ಕಡಬ, ಜು.28. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ದಿ ಯೋಜನೆ ಬಿಳಿನೆಲೆ ವಲಯದ, 102ನೇ ನೆಕ್ಕಿಲಾಡಿ ಓಕ್ಕೂಟದ ವತಿಯಿಂದ ಶ್ರಿ ಕ್ಷೇತ್ರ ನಡುಮಜಲು ಶ್ರೀ ಮಹಾವಿಷ್ಣು ದೇವಸ್ಥಾನ ಹೊಸಮ್ಮ ದೇವಿ ಹಾಗೂ ಪರಿವಾರ ದೈವಸ್ಥಾನದಲ್ಲಿ ವನವಹೋತ್ಸವ ಕಾರ್ಯಕ್ರಮವು ಇತ್ತೀಚೆಗೆ ನಡೆಯಿತು.

ಈ ಕಾರ್ಯಕ್ರಮದಲ್ಲಿ ಬಿಳಿನೆಲೆ ವಲಯ ಮೆಲ್ವಿಚಾರಕರಾದ ರಾಜು ಗೌಡ, ಬಿಳಿನೆಲೆ ಪ್ರಗತಿ ಬಂದು, ಸ್ವಸಹಾಯ ಸಂಘಗಳ ವಲಯಾಧ್ಯಕ್ಷರಾದ ಭವಾನಿ ಶಂಕರ್ ಬಿ., ಸೇವಾ ಪ್ರತಿನಿಧಿ ಸತಿಶ್.ಎ., ದೇವಸ್ಥಾನದ ಪ್ರಧಾನ ಅರ್ಚಕರಾದ ಗೋಪಾಲಕೃಷ್ಣ ಕೆದಿಲಾಯ, ಹೋಸಮ್ಮ ದೈವದ ಪರಿಚಾರಕ ವಿಶ್ವನಾಥ್ ರೈ , ಮೋಕ್ತೆಸರಾರದ ಚಂದ್ರಶೇಖರ ರೈ ನಡುಮಜಲು, ಆಡಳಿತ ಮಂಡಳಿಯ ಸದಸ್ಯರುಗಳಾದ ಅಜಿತ್ ಜೈನ್, ಅಶೋಕ್ ಕುಮಾರ್ ಹೆಗ್ಡೆ, ರತ್ನಕುಮಾರ್ ಹೆಗ್ಡೆ, ಬ್ರಹ್ಮಕಲಶ ಸಮಿತಿಯ ಸದಸ್ಯರಾದ ಬೇಬಿ ರೈ ಮಾಲೇಶ್ವರ, ರವಿಶಂಕರ್ ರೈ ನೆಕ್ಕಿತ್ತಡ್ಕ, ತಿಮ್ಮಪ್ಪ ನಾಯ್ಕ್ ಬದಿಗುಡ್ಡೆ ಹಾಗೂ ಯೋಜನೆಯ ಸದಸ್ಯರು ಪಾಲ್ಗೊಂಡಿದ್ದರು.

error: Content is protected !!

Join the Group

Join WhatsApp Group