ಸುಳ್ಯ: ವ್ಯಕ್ತಿಯ ಕಲ್ಲಿನಿಂದ ಜಜ್ಜಿ ಕೊಲೆ

(ನ್ಯೂಸ್ ಕಡಬ) newskadaba.com ಸುಳ್ಯ, ಜು.27. ಅಪರಿಚಿತ ವ್ಯಕ್ತಿಯೋರ್ವರನ್ನು ಕಲ್ಲಿನಿಂದ ಜಜ್ಜಿ ಬರ್ಬರವಾಗಿ ಕೊಲೆಗೈದ ಘಟನೆ ಗುರುವಾರದಂದು ಬೆಳಕಿಗೆ ಬಂದಿದೆ. ಸುಳ್ಯದ ಪಾಲುಬಿದ್ದ ಕಟ್ಟಡವೊಂದರಲ್ಲಿ ಮಲಗಿದ್ದ ವ್ಯಕ್ತಿಯನ್ನು ಬರ್ಬರವಾಗಿ ಕೊಲೆಗೈದ ಸ್ಥಿತಿಯಲ್ಲಿ ಕಂಡು ಬಂದಿದೆ.

ಬುಧವಾರ ರಾತ್ರಿ ಮಲಗಿದ್ದಲ್ಲಿ ಕಲ್ಲಿನಿಂದ ಜಜ್ಜಿ ಕೊಲೆಗೈದಿರಬಹುದೆಂದು ಶಂಕಿಸಲಾಗಿದೆ. ಸ್ಥಳದಲ್ಲಿ ನೀರಿನ ಬಾಟಲ್ ಹಾಗೂ ತಿನ್ನಲೆಂದು ಬೇಕರಿಯಿಂದ ತಂದಿದ್ದ ಶ್ಯಾವಿಗೆಯ ಪ್ಯಾಕೆಟನ್ನು ತೆರೆದ ಸ್ಥಿತಿಯಲ್ಲಿ ಇಡಲಾಗಿದ್ದು, ಯಾವ ಉದ್ದೇಶಕ್ಕಾಗಿ ಕೊಲೆಗೈಯಲಾಗಿದೆ ಎನ್ನುವುದು ತನಿಖೆಯ ನಂತರವಷ್ಟೇ ತಿಳಿದುಬರಬೇಕಿದೆ. ಸ್ಥಳಕ್ಕೆ ಸುಳ್ಯ ಪೊಲೀಸರು ಭೇಟಿ ಶೋಧ ನಡೆಸಿದರು.

error: Content is protected !!

Join the Group

Join WhatsApp Group