ಜಾಮೀನು ಕೊಡಿಸಲು ತಾಕತ್ ಇಲ್ಲಾಂದ್ರೆ ಬಳೆ ತೊಟ್ಟು ಮನೆಯಲ್ಲಿ ಕುಳಿತುಕೊಳ್ಳಲಿ.!! ► ಬಿಜೆಪಿ ಶಾಸಕನ ವಿರುದ್ಧ ಕಿಡಿಕಾರಿದ ಚೈತ್ರಾ ಕುಂದಾಪುರ ಆಡಿಯೋ ವೈರಲ್

(ನ್ಯೂಸ್ ಕಡಬ) newskadaba.com ಗಂಗಾವತಿ, ಅ.30. ಹಿಂದುತ್ವದ ಫೈರ್ ಬ್ರಾಂಡ್ ಚೈತ್ರಾ ಕುಂದಾಪುರ ಕುಕ್ಕೇ ಸುಬ್ರಹ್ಮಣ್ಯದಲ್ಲಿ ನಡೆದ ಹಲ್ಲೆ ಘಟನೆಯಿಂದಾಗಿ ಜೈಲುಪಾಲಾಗಿರುವ ಬೆನ್ನಲ್ಲೇ ಗಂಗಾವತಿ ಬಿಜೆಪಿ ಶಾಸಕರು ಚೈತ್ರಾಳನ್ನು ಮೂಲೆಗುಂಪು ಮಾಡಿದ್ದು, ಈ ಬಗ್ಗೆ ಸ್ವತಃ ಚೈತ್ರಾ ಕುಂದಾಪುರ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಆಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಪತ್ರಕರ್ತೆಯಾಗಿದ್ದ ಚೈತ್ರಾ ಕುಂದಾಪುರ ಹಿಂದುತ್ವದ ಫೈರ್ ಬ್ರಾಂಡ್ ಆಗಿ ಗುರುತಿಸಿಕೊಂಡ ಕ್ಷಣದಲ್ಲೇ ತನ್ನ ಮಾತಿನ ಮೋಡಿಯಲ್ಲೇ ಬಿಜೆಪಿಯ ಸ್ಟಾರ್ ಪ್ರಚಾರಕಿಯಾಗಿ ಯುವ ಮನಸ್ಸುಗಳನ್ನು ಗೆಲ್ಲುವ ಮೂಲಕ ರಾಜ್ಯದ ಹಲವೆಡೆ ಬಿಜೆಪಿ ಗೆಲುವಿಗೆ ಪರೋಕ್ಷ ಕಾರಣರಾಗಿದ್ದರು. ಚುನಾವಣೆಯ ಸಂದರ್ಭದಲ್ಲಿ ಬಿಜೆಪಿಯು ಚೈತ್ರಾಗೆ ವೇದಿಕೆ ಒದಗಿಸಿಕೊಟ್ಟಿದ್ದರಿಂದಾಗಿ ಚೈತ್ರಾ ಮಾಡಿದ ಭಾಷಣಗಳಿಗೆ ಹಲವು ಫ್ಯಾನ್ಸ್ ಗಳು ಹುಟ್ಟಿಕೊಂಡಿದ್ದರು. ಅಲ್ಲದೆ ಚೈತ್ರಾ ಹಿಂದೂತ್ವದ ಕಾಳಿಮಾತೆ ಎನ್ನುವಂತೆ ಆಕೆಯ ಫೋಟೋಗಳನ್ನು ತಮ್ಮ ಬೈಕ್ ಗಳಲ್ಲಿ ಮುಗ್ಧ ಯುವಕರು ಹಾಕಿಕೊಂಡಿದ್ದರು. ಆದರೆ ಸುಬ್ರಹ್ಮಣ್ಯ ದೇವಸ್ಥಾನದ ವಿಚಾರಕ್ಕೆ ಯಾವಾಗ ಚೈತ್ರಾ ಕೈ ಹಾಕಿದರೋ ಆವಾಗ ಎಲ್ಲರೂ ಚೈತ್ರಾ ವಿರುದ್ಧವೇ ನಿಂತುಕೊಂಡರು.

ಇದಕ್ಕೆ ಕಾರಣವೆಂಬಂತೆ ಹಿಂದೆ ಕರ್ನಾಟಕ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಗಂಗಾವತಿ ಶಾಸಕ ಪರಣ್ಣ ಮುನ್ನವಳ್ಳಿ ಪರವಾಗಿ ಚೈತ್ರಾ ಪ್ರಚಾರ ಮಾಡಿದ್ದು, ಈ ಸಂದರ್ಭದಲ್ಲಿ ಅನುಮತಿ ಪಡೆಯದೆ ಪ್ರಚಾರ ನಡೆಸಿದ ಬಗ್ಗೆ ಅವರ ವಿರುದ್ಧ ದಾಖಲಾಗಿರುವ ನಾಲ್ಕು ಕೇಸುಗಳು ಹಾಗೇ ಉಳಿದಿವೆ. ಈ ಕೇಸುಗಳಲ್ಲಿಯೂ ಚೈತ್ರಾ ಕುಂದಾಪುರ ಅರೆಸ್ಟ್ ಆಗುವ ಸಾಧ್ಯತೆಗಳಿರುವ ಹಿನ್ನೆಲೆಯಲ್ಲಿ ಪರಣ್ಣ ವಿರುದ್ಧ ಚೈತ್ರಾ ಆಕ್ರೋಶದ ಮಾತುಗಳನ್ನಾಡಿದ್ದು, “ಶಾಸಕ ಪರಣ್ಣ ಮುನ್ನವಳ್ಳಿಗೆ ಜಾಮೀನು ಕೊಡಿಸುವ ತಾಕತ್ ಇಲ್ಲಾಂದ್ರೆ ನಾನು ಬಳೆ ಕಳಿಸ್ತೇನೆ. ಮನೆಯಲ್ಲಿ ಬಳೆ ತೊಟ್ಟುಕೊಂಡು ಕುಳಿತುಕೊಳ್ಳಲಿ. ಹೇಗೆ ಜಾಮೀನು ಪಡೆದುಕೊಳ್ಳಬೇಕು ಎನ್ನುವುದು ನನಗೆ ತಿಳಿದಿದೆ. ಬಡವರ ಮಕ್ಕಳನ್ನು ಬೀದಿಯಲ್ಲಿ ನಾಯಿಗಳಂತೆ ಕ್ಯಾಂಪೇನ್ ಮಾಡಿಸಿ, ಗೆದ್ದು ಹಣದ ಮೂಟೆ ಕಟ್ಟವವರು” ಎಂದೆಲ್ಲಾ ಚೈತ್ರಾ ಶಾಸಕ ಪರಣ್ಣ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಲ್ಲದೆ ಏಕವಚನದಲ್ಲಿ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿರುವುದು ಇದೀಗ ಬಿಜೆಪಿ ಪಾಳಯಕ್ಕೆ ಭಾರೀ ಮುಜುಗರವ ಉಂಟು ಮಾಡಿದೆ. ಇದರ ಆಡಿಯೋ ಕ್ಲಿಪ್ ಇದೀಗ ಸಾಮಾಜಿಕವಾಗಿ ಜಾಲತಾಣಗಳಲ್ಲಿ ವೈರಲ್ ಆಗಿವೆ.

error: Content is protected !!

Join the Group

Join WhatsApp Group