(ನ್ಯೂಸ್ ಕಡಬ) newskadaba.com ಆ. 30. ಕಳೆದೆರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ ಆಲೆಟ್ಟಿ ಗ್ರಾಮದ ಕುದ್ಕುಳಿಯ ನಿವಾಸಿ ಗಿರೀಶ್ ಎಂಬವರ ಮೃತದೇಹವು ಇಂದು(ಭಾನುವಾರದಂದು) ಪಯಸ್ವಿನಿ ನದಿಯಲ್ಲಿ ಪತ್ತೆಯಾಗಿದೆ.
ಮನೆಯಿಂದ ಹುಲ್ಲು ತರಲೆಂದು ಹೋಗಿದ್ದ ಗಿರೀಶ್ ಬಳಿಕ ನಾಪತ್ತೆಯಾಗಿದ್ದರು. ಹುಡುಕಾಟದ ವೇಳೆ ಬಪಯಸ್ವಿನಿ ನದಿ ತಟದಲ್ಲಿಅವರ ಕೊಡೆ ಮತ್ತು ಕತ್ತಿ ಪತ್ತೆಯಾಗಿದ್ದು, ಬಳಿಕ ಪೊಲೀಸ್ ದೂರು ನೀಡಲಾಗಿತ್ತು.
ಸುಳ್ಯ ಪೋಲಿಸ್ ಇಲಾಖೆಯವರ ನೇತೃತ್ವದಲ್ಲಿ ಅಗ್ನಿ ಶಾಮಕ ದಳದ ಸಿಬ್ಬಂದಿಯವರು ಕಳೆದ ಎರಡು ದಿನಗಳಿಂದ ಹುಡುಕಾಟದಲ್ಲಿ ನಿರತರಾಗಿದ್ದರು. ಸದ್ಯ ಆದಿತ್ಯವಾರ ಬೆಳಗ್ಗೆ ಹುಡುಕಾಟ ನಡೆಸುವ ಸಂದರ್ಭದಲ್ಲಿ ವಿಶ್ವನಾಥ ಶೆಟ್ಟಿಯವರ ಮೃತದೇಹವು ಪಯಸ್ವಿನಿ ನದಿಯಲ್ಲಿ ಪತ್ತೆಯಾಗಿರುವುದಾಗಿ ಎಂದು ತಿಳಿದು ಬಂದಿದೆ.








