(ನ್ಯೂಸ್ ಕಡಬ) newskadaba.com ,ಎ10: ರಘು ಬಿಜೂರ್ ರವರಿಗೆ ಏ.5 ರಂದು ರಾಜ್ಯ ಗಾನಸಿರಿ ಕರ್ನಾಟಕ ಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಹಿಂದೂಸ್ತಾನಿ ಸುಗಮ ಸಂಗೀತ ಕ್ಷೇತ್ರದಲ್ಲಿ ಸಾಧನೆಗಾಗಿ ಗಾನಸಿರಿ ಸಂಗೀತ ಕಲಾ ಪುತ್ತೂರು ಇವರ ವಜ್ರಮಹೋತ್ಸವ ಸಂದರ್ಭದಲ್ಲಿ ರಾಜ್ಯದಲ್ಲಿ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದ ಅನೇಕ ಕಲಾವಿದರನ್ನು ಗುರುತಿಸಿ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಮಾಜಿ ಎಂ.ಎಲ್.ಎ, ಮಾಜಿ ಸಚಿವೆ ಶಕುಂತಲಾ ಶೆಟ್ಟಿ ಮತ್ತು ಸಂಗೀತ ವಿಧೂಷಿ ಡಾl ಅರವಿಂದ ಜಯಶ್ರೀ ಇವರ ಮೂಲಕ ನೀಡಲಾಯಿತು. ಗಾನಸಿರಿ ಕೇಂದ್ರದ ನಿರ್ದೇಶಕರಾದ ಕಿರಣ್ ಕುಮಾರ್ ಉಪಸ್ಥಿತರಿದ್ದರು









