(ನ್ಯೂಸ್ ಕಡಬ) newskadaba.com, ಮಾ.04 : ತಾಲೂಕಿನ ಅರಂತೋಡು ಗ್ರಾಮದ ಅಡ್ತಲೆಯ ನೆಕ್ಕರೆ ಎಂಬಲ್ಲಿ ಫೆ.2ರ ರಾತ್ರಿ ಕಾಡಾನೆಗಳು ದಾಳಿ ಕೃಷಿ ನಾಶ ಪಡಿಸಿದ ಘಟನೆ ವರದಿಯಾಗಿದೆ.
ಇಲ್ಲಿಯ ದಾಸಪ್ಪ ಎಂಬರ ತೋಟಕ್ಕೆ ನುಗ್ಗಿದ ಕಾಡಾನೆಗಳು ಬಾಳೆ,ತೆಂಗಿನ ಮರಗಳನ್ನು ನಾಶ ಪಡಿಸಿದೆ ಎಂದು ತಿಳಿದು ಬಂದಿದೆ. ಅಡ್ತಲೆ ಭಾಗದಲ್ಲಿ ಇದು ಕಳೆದ ಅನೇಕ ಸಮಯಗಳಿಂದ ನಿರಂತರವಾಗಿ ಕಾಡಾನೆಗಳು ಕೃಷಿ ನಾಶ ಮಾಡಿ ರೈತರ ಜೀವನದ ಜೊತೆ ಚೆಲ್ಲಾಟ ಆಡುತ್ತಿದೆ.








