(ನ್ಯೂಸ್ ಕಡಬ) newskadaba.com,ಜ.29 ಸುಳ್ಯ:ಐವರ್ನಾಡು ಗ್ರಾಮದ ಉದ್ದಂಪಾಡಿ ಎಂಬಲ್ಲಿ ಕೃಷಿಕರ ತೋಟಗಳಿಗೆ ಕಾಡಾನೆ ಧಾಳಿ ಮಾಡಿ ಅಪಾರ ಕೃಷಿ ನಾಶ ಪಡಿಸಿದ ಘಟನೆ ನಡೆದಿದೆ.
ಉದ್ದಂಪಾಡಿ ಹೊನ್ನಪ್ಪ ನಾಯ್ಕ್ ಮತ್ತು ಕರುಣಾಕರ ನಾಯ್ಕ್ ಎಂಬವರ ಕೃಷಿ ತೋಟಕ್ಕೆ ಭಾನುವಾರ ರಾತ್ರಿ ಆನೆಗಳು ಧಾಳಿ ಮಾಡಿ ಅಪಾರ ಕೃಷಿ ನಾಶಮಾಡಿದೆ. ಅಡಕೆ ಗಿಡ, ಬಾಳೆ ,ತೆಂಗಿನ ಗಿಡಗಳನ್ನು ಪುಡಿಗಟ್ಟಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.
ಐವರ್ನಾಡು : ಕೃಷಿ ತೋಟಕ್ಕೆ ಕಾಡಾನೆ ಧಾಳಿ – ಅಪಾರ ಕೃಷಿ ನಾಶ








