ಕೊಯಿಲ: ಅಸಹಾಯಕ ವ್ಯಕ್ತಿಗೆ ಅಂಗಡಿ ವ್ಯವಸ್ಥೆಗೊಳಿಸಿ ಸಹಾಯ



(ನ್ಯೂಸ್ಕಡಬ) newskadaba.com  ಅ. 15. ಅನಾರೋಗ್ಯದಿಂದಾಗಿ ದುಡಿಯಲಾಗದ ಸ್ಥಿತಿಯಲ್ಲಿದ್ದ ಕೊಯಿಲ ಗ್ರಾಮದ ಸನ್ಯಾಸಿಮೂಲೆ ನಿವಾಸಿ ಶಿಹಾಬುದ್ದೀನ್ ಎಂಬವರಿಗೆ ಕುಂತೂರು ಚರ್ಚ್‍ ನ ಟ್ರಸ್ಟ್ ವತಿಯಿಂದ ಪೆಟ್ಟಿ ಅಂಗಡಿಯೊಂದನ್ನು ನೀಡಿ ಅವರಿಗೆ ವ್ಯಾಪಾರಕ್ಕೆ ಅನುವು ಮಾಡಿ, ಜೀವನ ನಿರ್ವಹಣೆಗೆ ವ್ಯವಸ್ಥೆ ಮಾಡಿಕೊಟ್ಟು ಸಹಾನುಭೂತಿ ತೋರಿದ್ದಾರೆ.





ಶಿಹಾಬುದ್ದೀನ್‍ ರವರು ಕಳೆದ ಕೆಲ ಸಮಯದಿಂದ ರೋಗ ಭಾದೆಗೆ ಒಳಗಾಗಿ ಕೂಲಿ ಕೆಲಸಗಳಿಗೂ ಹೋಗಲು ಅಸಾಧ್ಯವಾಗಿ ದುಡಿಯಲಾಗದ ಸ್ಥಿತಿಯಲ್ಲಿದ್ದರು. ಪತ್ನಿ ಮತ್ತು ಇಬ್ಬರು ಪುಟ್ಟಮಕ್ಕಳನ್ನು ಹೊಂದಿರುವ ಇವರ ಕುಟುಂಬದ ಜೀವನ ನಿರ್ವಹಣೆಗೆ ಕಷ್ಟವಾಗಿತ್ತು. ಇದನ್ನು ಮನಗಂಡ ಸ್ಥಳೀಯ ನಿವಾಸಿ ಅಬ್ರಹಾಂ ಕೆ.ಜಿ.ಯವರು ಕುಂತೂರು ಸೈಂಟ್ ಮೇರೀಸ್ ಜಾಕೋಬೈಟ್ ಸಿರಿಯನ್ ಚರ್ಚ್‍ ನ ಧರ್ಮಗುರು ಪಿ.ಕೆ. ಅಬ್ರಾಹಾಂ ಟ್ಟಸ್ಟ್ ಅವರ ಗಮನಕ್ಕೆ ತಂದಿದ್ದು, ಇವರ ನೇತೃತ್ವದಲ್ಲಿರುವ “ಮೈ ಬೆಸ್ಟ್ ಫ್ರೆಂಡ್ಸ್” ಚಾರಿಟಿ ಟ್ರಸ್ಟ್ ಮೂಲಕ ಇವರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಸಲುವಾಗಿ ಯೋಜನೆ ರೂಪಿಸಿ ಸಹಾಯಹಸ್ತ ನೀಡಿದ್ದಾರೆ.






ಶಿಹಾಬುದ್ದೀನ್‍ ಗೆ ಪೆಟ್ಟಿ ಅಂಗಡಿಯೊಂದನ್ನು ವ್ಯವಸ್ಥೆ ಮಾಡಿ ವ್ಯಾಪಾರ ನಡೆಸಲು ಅನುವು ಮಾಡಿಕೊಟ್ಟಿರುತ್ತಾರೆ. ಅ. 14ರಂದು ಕುಂತೂರು ಚರ್ಚ್ ಧರ್ಮಗುರು ಪಿ.ಕೆ. ಅಬ್ರಹಾಂ ಅಂಗಡಿ ವ್ಯವಸ್ಥೆಯನ್ನು ಹಸ್ತಾಂತರಿಸಿದರು. ಟ್ರಸ್ಟ್ ಸದಸ್ಯ ಪ್ರಶಾಂತ್ ನೆಲ್ಯಾಡಿ, ಸುಜನ್ ರೆಂಜಲಾಡಿ, ಚರ್ಚ್‍ ನ ಲೆಕ್ಕಪರಿಶೋಧಕ ಅಬ್ರಹಾಂ ಕೆ.ಜಿ., ಗಂಡಿಬಾಗಿಲು ಮಸೀದಿ ಖತೀಬ್ ಅಬ್ದುಲ್ ರಜಾಕ್ ಸುಲ್ತಾನ್ ದಾರಿಮಿ, ಯಂಗ್‍ ಮೆನ್ಸ್ ಅಧ್ಯಕ್ಷ ನಿಸಾರ್ ಗಂಡಿಬಾಗಿಲು, ಕಾರ್ಯದರ್ಶಿ ಜಿ. ಅಬ್ದುಲ್ ರಜಾಕ್, ಮಾಜಿ ಅಧ್ಯಕ್ಷ ಪಿ. ಲತೀಫ್, ಪದಾಧಿಕಾರಿಗಳಾದ ಯಾಕೂಬ್, ಮಹಮ್ಮದ್ ಆಲಿ, ಉಬೈದುಲ್ಲ ಮತ್ತಿತರರು ಉಪಸ್ಥಿತರಿದ್ದರು.

error: Content is protected !!
Scroll to Top