(ನ್ಯೂಸ್ ಕಡಬ) newskadaba.com, ಅ.02 ಕಡಬ: ಸ್ಕೂಟರ್ ಮೇಲೆ ಕೆಸರು ರಾಚಿದ್ದಕ್ಕೆ ಸವಾರ ಆಕ್ರೋಶ ವಾಹನ ಸ್ವಚ್ಛಗೊಳಿಸಲು ತೋಡಿನಿಂದ ನೀರು ತಂದ ಕೆಎಸ್ಆರ್ಟಿಸಿ ಸಿಬ್ಬಂದಿ ಈ ಘಟನೆಯು ಸುಬ್ರಹ್ಮಣ್ಯ-ಕಡಬ ರಾಜ್ಯ ಹೆದ್ದಾರಿಯ ನೆಟ್ಟಣ ಸೇತುವೆ ಸಮೀಪ ನಡೆದಿದೆ.
ಕೆಸರು ರಾಚಿದ ಕಾರಣ ಕೆರಳಿದ ಸವಾರ ಬಸ್ ಅನ್ನು ನಿಲ್ಲಿಸಿ, ಕಂಡಕ್ಟರ್ ಮತ್ತು ಚಾಲಕರನ್ನು ತರಾಟೆಗೆ ತೆಗೆದುಕೊಂಡಿದ್ದಾನೆ.ಸಿಬ್ಬಂದಿ ಆತನನ್ನು ಸಮಾಧಾನಪಡಿಸಲು ಪ್ರಯತ್ನಿಸಿದರೂ, ಆತ ಸುಮ್ಮನಾಗದೆ ವಾಗ್ವಾದ ಮುಂದುವರೆಸಿದ್ದಾನೆ.
ಕೊನೆಗೆ, ಬಸ್ ಸಿಬ್ಬಂದಿ ಸಮೀಪದ ತೋಡಿನಿಂದ ಬಕೆಟ್ನಲ್ಲಿ ನೀರು ತಂದು, ಸ್ಕೂಟರಿಗಾದ ಕೆಸರನ್ನು ತೊಳೆಯಲು ಸಹಾಯ ಮಾಡಿದ್ದಾರೆ. ಇದರಿಂದ ಸವಾರ ಶಾಂತನಾದನು ಎಂದು ತಿಳಿದುಬಂದಿದೆ.








