ಉಳ್ಳಾಲ: ಪಿಂಡ ಪ್ರದಾನಕ್ಕೆಂದು ಬಂದಿದ್ದ ಮಹಿಳೆ ಸಮುದ್ರಪಾಲು

Death, deadbody, Waterfall

(ನ್ಯೂಸ್ ಕಡಬ) newskadaba.com ಡಿ. 16 ಉಳ್ಳಾಲ: ತಂಗಿಯ ಗಂಡನ ಪಿಂಡ ಪ್ರದಾನ ವಿಧಿಯಲ್ಲಿ ಪಾಲ್ಗೊಳ್ಳಲು ಬಂದಿದ್ದ ಮಹಿಳೆಯೊಬ್ಬರು ಸಮುದ್ರಪಾಲಾಗಿ ಮೃತಪಟ್ಟ ಘಟನೆ ಸೋಮೇಶ್ವರ ಸಮುದ್ರ ತೀರದಲ್ಲಿ ಇಂದು ಬೆಳಗ್ಗೆ ಸಂಭವಿಸಿದೆ.

ದೇರೆಬೈಲ್ ನ ದಿವಂಗತ ಜಗದೀಶ್ ಭಂಡಾರಿ ಎಂಬವರ ಪತ್ನಿ ಉಷಾ ಮೃತಪಟ್ಟವರು. ಉಷಾ ಅವರ ತಂಗಿಯ ಪತಿ ನಿಧನರಾಗಿದ್ದು, ಇಂದು ಅವರ ಪಿಂಡ ಪ್ರದಾನ ವಿಧಿಗಾಗಿ ಕುಟುಂಬಸ್ಥರು ಸೋಮೇಶ್ವರಕ್ಕೆ ಬಂದಿದ್ದರು. ಇವರ ಜೊತೆಗೆ ಉಷಾ ಕೂಡಾ ಬಂದಿದ್ದರು. ಪಿಂಡ ಪ್ರದಾನದ ಬಳಿಕ ಸಮುದ್ರದಲ್ಲಿ ಸ್ನಾನ ಪ್ರಕ್ರಿಯೆ ನಿರ್ವಹಿಸುತ್ತಿದ್ದ ವೇಳೆ ಉಷಾ ಕಾಲುಜಾರಿ ಸಮುದ್ರ ಪಾಲಾಗಿದ್ದಾರೆನ್ನಲಾಗಿದೆ. ಸಹಾಯಕ್ಕಾಗಿ ಕೂಗಿದಾಗ ಸ್ಥಳೀಯರು ಅವರನ್ನು ಸಮುದ್ರದಿಂದ ಮೇಲೆತ್ತಿ ತಟಕ್ಕೆ ತರುವಷ್ಟರಲ್ಲಿ ಕೊನೆಯುಸಿರೆಳೆದಿದ್ದರು ಎಂದು ತಿಳಿದುಬಂದಿದೆ. ಈ ಕುರಿತು ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಎಮರ್ಜೆನ್ಸಿ ಘೋಷಣೆ.!

error: Content is protected !!
Scroll to Top