ಬಂಟ್ವಾಳ : ನದಿಯಂಚಿನ ತಡೆಗೋಡೆ ದುರಸ್ತಿಗೊಳಿಸಲು ಗ್ರಾಮಸ್ಥರ ಆಗ್ರಹ

(ನ್ಯೂಸ್ ಕಡಬ) newskadaba.com ಡಿ. 04 ಬೆಂಗಳೂರು: ತಾಲೂಕು ಕೇಂದ್ರದಿಂದ ಸರಪಾಡಿ, ಅಜಿಲಮೊಗರು ಭಾಗವನ್ನು ಸಂಪರ್ಕಿಸುವ ಅತಿ ಸಮೀಪದ ರಸ್ತೆಯಾಗಿರುವ ಪೂಪಾಡಿಕಟ್ಟೆ-ಪೆರ್ಲ-ಬೀಯಪಾದೆ ರಸ್ತೆಯು ನೇತ್ರಾವತಿ ಕಿನಾರೆಯಲ್ಲೇ ಸಾಗುತ್ತಿದ್ದು, ಪೆರ್ಲ ಭಾಗದಲ್ಲಿ ಪೂರ್ತಿ ನೀರು ನಿಂತಿರುವ ನದಿಯಂಚಿನಲ್ಲೇ ಸಾಗುತ್ತಿದೆ. ಪ್ರಸ್ತುತ ಇಲ್ಲಿ ನಿರ್ಮಿಸಿರುವ ತಡೆಗೋಡೆಯ ಕುರಿತು ಸಾರ್ವಜನಿಕರು ಆತಂಕ ವ್ಯಕ್ತಪಡಿಸುತ್ತಿದ್ದು, ಅದರ ನಿರ್ವಹಣೆಯ ಭಾಗವಾಗಿ ತಡೆಗೋಡೆಯನ್ನು ದುರಸ್ತಿಗೊಳಿಸಬೇಕು ಎಂಬ ಆಗ್ರಹ ಕೇಳಿ ಬರುತ್ತಿದೆ.

ಶಂಭೂರು ಎಎಂಆರ್ ಅಣೆಕಟ್ಟಿನಲ್ಲಿ ನೀರು ನಿಲ್ಲಿಸಿರುವ ಪರಿಣಾಮ ಸರಪಾಡಿ ಭಾಗದಲ್ಲಿ ವರ್ಷಪೂರ್ತಿ ಅದರ ಹಿನ್ನೀರಿ ನದಿಯಲ್ಲಿ ತುಂಬಿರುತ್ತಿದ್ದು, ರಸ್ತೆಯು ನದಿಯಂಚಿನಲ್ಲೇ ಸಾಗುತ್ತಿದೆ. ಪೆರ್ಲ ಭಾಗದಲ್ಲಿ ಅಣೆಕಟ್ಟು ನಿರ್ಮಾಣದ ಸಂದರ್ಭ ತಡೆಗೋಡೆ ನಿರ್ಮಿಸಿ ವಾಹನ ಸಂಚಾರಕ್ಕೆ ಅವಕಾಶ ಕಲ್ಪಸಲಾಗಿದ್ದು, ಅದರ ಬಳಿಕ ತಡೆಗೋಡೆಯ ನಿರ್ವಹಣೆಯನ್ನು ಮಾಡಿಲ್ಲ. ಒಂದಷ್ಟು ಕಡೆಗಳಲ್ಲಿ ನದಿಯ ಒಳಭಾಗದಲ್ಲಿ ತಡೆಗೋಡೆಗೆ ಹಾನಿಯಾಗಿದೆ ಎನ್ನಲಾಗಿದ್ದು, ಹೀಗಾಗಿ ಅದರ ದುರಸ್ತಿಗೆ ಆಗ್ರಹಿಸುತ್ತಿದ್ದಾರೆ. ಮಳೆಗಾಲದ ಸಂದರ್ಭದಲ್ಲಿ ರಸ್ತೆ ಸಮನಾಗಿ ನೀರಿರುತ್ತಿದ್ದು, ಪ್ರವಾಹದ ಸಂದರ್ಭದಲ್ಲಿ ರಸ್ತೆಗೂ ನೀರು ಬೀಳುತ್ತದೆ. ಮಳೆಗಾಲದಲ್ಲಿ ವಾಹನ ಚಾಲನೆ ಮಾಡುವ ಸಂದರ್ಭದಲ್ಲಿ ನದಿಯ ನೀರನ್ನು ಕಂಡರೆ ಆತಂಕ ಪಡುವ ಮಟ್ಟಿಗೆ ಅಬ್ಬರ ಇರುತ್ತದೆ. ಇಂತಹ ಪರಿಸ್ಥಿತಿ ಇರುವ ತಡೆಗೋಡೆಗೆ ಹಾನಿಯಾದರೆ ರಸ್ತೆ ನೀರು ಪಾಲಾಗುವ ಜತೆಗೆ ವಾಹನಗಳು ಕೂಡ ಅಪಾಯದ ಸ್ಥಿತಿ ಎದುರಿಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಽಕಾರಿ ವರ್ಗ ಇತ್ತ ಗಮನಹರಿಸಿ ತಡೆಗೋಡೆಯನ್ನು ದುರಸ್ತಿ ಪಡಿಸಬೇಕು ಎನ್ನು ಆಗ್ರಹಿಸಲಾಗುತ್ತಿದೆ.

Also Read  How you can Activate Home Windows Q0 without Cost Permanently In 2024

error: Content is protected !!
Scroll to Top