ವಿಟ್ಲ:ನೇಣುಬಿಗಿದು ವ್ಯಕ್ತಿಯೋರ್ವರು ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ವಿಟ್ಲ, . 20. ವಿಟ್ಲ ಸಮೀಪದ ಕುಂಡಡ್ಕದ ಮರುವಾಳ ನಿವಾಸಿ ತಿಮ್ಮಪ್ಪ ಪೂಜಾರಿಯವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ.

ಮೃತರು ನ.19ರಂದು ಸಂಜೆ ಮನೆಯಿಂದ ಹೊರ ಹೋದವರು ಬಳಿಕ ಮರಳಿ ಮನೆಗೆ ಬಾರದೆ ನಾಪತ್ತೆಯಾಗಿದ್ದರು. ಅವರಿಗಾಗಿ ಮನೆಮಂದಿ ಹುಟುಕಾಟ ನಡೆಸಿದಾಗ ಮನೆ ಸಮೀಪದ ಗುಡ್ಡದಲ್ಲಿ ತಿಮ್ಮಪ್ಪ ಪೂಜಾರಿಯವರ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ವಿಟ್ಲ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿ ಮಾಹಿತಿ ಸಂಗ್ರಹಿಸಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.

Also Read  ಎಪಿಎಲ್ ಕಾರ್ಡ್ ದಾರರಿಗೆ ನಿರ್ದಿಷ್ಟ ದರದಲ್ಲಿ ಸಿಗುತ್ತಿದ್ದ ಅಕ್ಕಿ ವಿಳಂಬ

error: Content is protected !!
Scroll to Top