ಕೃಷ್ಣಾ ನದಿಗೆ ಮಾಲಿನ್ಯ ನಿಯಂತ್ರಣ ಮಂಡಳಿ ಭೇಟಿ

(ನ್ಯೂಸ್ ಕಡಬ) newskadaba.com ರಾಯಚೂರು,  . 13. ವಿದ್ಯುತ್ ಕೇಂದ್ರಗಳು ಎಗ್ಗಿಲ್ಲದೇ ಕೃಷ್ಣಾ ನದಿಗೆ ರಾಸಾಯನಿಕ ವಸ್ತುಗಳನ್ನು ಹರಿಬಿಡುತ್ತಿದ್ದು, ಈ ಕುರಿತು ಮಾಧ್ಯಮದಲ್ಲಿ  ಸುದ್ದಿಗಳು ಪ್ರಕಟಗೊಂಡ ಬೆನ್ನಲ್ಲೇ ಎಚ್ಚೆತ್ತುಕೊಂಡ ಮಾಲಿನ್ಯ ನಿಯಂತ್ರಣ ಮಂಡಳಿಯು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.

ಬೃಹತ್ ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳಾದ ಆರ್‌ಟಿಪಿಎಸ್ ಹಾಗೂ ವೈಟಿಪಿಎಸ್ ಜಿಲ್ಲೆಯ ಹೆಮ್ಮೆ. ಇದರಲ್ಲಿ ವಿದ್ಯುತ್ ಕೇಂದ್ರಗಳು ಜೀವಮಾರಕವಾಗಿರುವ ರಾಸಾಯನಿಕವನ್ನು ನೇರವಾಗಿ ಕೃಷ್ಣಾ ನದಿಗೆ ಹರಿಬಿಡುತ್ತಿದೆ. ವಿದ್ಯುತ್ ಕೇಂದ್ರದ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ, ಬೇಜವಾಬ್ದಾರಿತನದ ಬಗ್ಗೆ ವರದಿಯಾದ ಬೆನ್ನಲ್ಲೇ ಮಾಲಿನ್ಯ ನಿಯಂತ್ರಣ ಮಂಡಳಿಯ ಜಿಲ್ಲಾ ಪರಿಸರ ಅಧಿಕಾರಿಗಳ ತಂಡ ಪರಿಶೀಲನೆಗೆ ಮುಂದಾಗಿದೆ.

Also Read  ➤ ಉಡುಪಿಯಿಂದ ಮಕ್ಕಾ- ಮದೀನಾಕ್ಕೆ ಉಮ್ರಾ ನೆರವೇರಿಸಲು ಹೋಗಿದ್ದ ಇಬ್ಬರು ಮಹಿಳೆಯರು ಮೃತ್ಯು..!

 

error: Content is protected !!
Scroll to Top