ಅನಾರೋಗ್ಯಕ್ಕೆ ತುತ್ತಾಗಿ ಯುವ ಕಬ್ಬಡ್ಡಿ ಆಟಗಾರ ಮೃತ್ಯು..!

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, . 13.  ಉಜಿರೆ ಕಾಲೇಜಿನ ದ್ವಿತೀಯ ಪಿಯುಸಿ ಕಲಾ ವಿಭಾಗದ ವಿದ್ಯಾರ್ಥಿ, ಯುವ ಪ್ರತಿಭೆ ಚಿನ್ಮಯ ಗೌಡ ಪಿ.ಕೆ. (18) ಅವರು ಅನಾರೋಗ್ಯದಿಂದ ನ.12ರಂದು ಕೊನೆಯುಸಿರೆಳೆದಿದ್ದಾರೆ.

ಮೂಲತಃ ಮಂಡ್ಯದವರಾದ ಚಿನ್ಮಯ ಗೌಡ ಹಾಸ್ಟೆಲ್‌ನಲ್ಲಿದ್ದು, ಉಜಿರೆ ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರು. ಉತ್ತಮ ಕಬಡ್ಡಿ ಪಟುವಾಗಿದ್ದ ಅವರು ಕಾಲೇಜಿಗೆ ಹಲವಾರು ಪ್ರಶಸ್ತಿಗಳನ್ನು ಗೆದ್ದುಕೊಟ್ಟಿದ್ದಾರೆ. ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಮಂಡ್ಯದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ದುರಾದೃಷ್ಟವಶಾತ್ ಚಿಕಿತ್ಸೆ ಫಲಿಸದೆ ಚಿನ್ಮಯ ನಿಧನರಾಗಿದ್ದಾರೆ.

Also Read  ವಿಧಾನ ಸಭಾ ಚುನಾವಣಾ ಹಿನ್ನೆಲೆ: ಕಡಬ ತಾಲೂಕಿನ ಇಬ್ಬರು ಸೇರಿದಂತೆ 11 ಮಂದಿಯ ಗಡಿಪಾರು ಆದೇಶ

 

error: Content is protected !!
Scroll to Top