ಜರ್ಮನಿ ಪ್ರವಾಸ ಕೈಗೊಂಡ ಸ್ವೀಕರ್ ನಿಯೋಗ

(ನ್ಯೂಸ್ ಕಡಬ) newskadaba.com ಅ. 11. ಹಾನ್ಸ್ ಸೀಡಲ್ ಸ್ಟಿಫ್‍ ಟಿಂಗ್ ಪೌಂಡೇಶನ್ (Hanns Seidel Stiftung Foundation), ಬವೇರಿಯ, ಜರ್ಮನಿ ಇವರ ಆಹ್ವಾನದ ಮೇರೆಗೆ ಸ್ಪೀಕರ್ ಯು.ಟಿ.ಖಾದರ್ ಫರೀದ್ ನೇತೃತ್ವದಲ್ಲಿ ನಿಯೋಗವು ಅಕ್ಟೋಬರ್ 6ರಿಂದ ಜರ್ಮನಿ ಪ್ರವಾಸ ಕೈಗೊಂಡಿದೆ. ಸಭಾಧ್ಯಕ್ಷರ ಅಧ್ಯಕ್ಷತೆಯ ನಿಯೋಗವು ಬವೇರಿಯಾದಲ್ಲಿರುವ ಸೌತ್ ಜರ್ಮನಿಯ ಭಾರತದ ಕಾನ್ಸಲ್ ಜನರಲ್ ಆಫ್ ಇಂಡಿಯಾ ಶತ್ರುಘ್ನ ಸಿಕ್ಕ ಅವರನ್ನು ಭೇಟಿ ಮಾಡಿ ಚರ್ಚಿಸಿದರು. ನಿಯೋಗದಲ್ಲಿ ಕರ್ನಾಟಕ ವಿಧಾನಸಭೆಯ ಉಪಸಭಾಧ್ಯಕ್ಷ ರುದ್ರಪ್ಪ ಮಾನಪ್ಪ ಲಮಾಣಿ, ಶಾಸಕರಾದ ಉಮಾನಾಥ್ ಕೋಟ್ಯಾನ್, ಅಶೋಕ್ ಕುಮಾರ್ ರೈ, ಕೌಜಲಗಿ ಮಹಂತೇಶ್ ಶಿವಾನಂದ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!

Join WhatsApp Group

WhatsApp Share