ಶಾಂತಿನಗರ: ಅಡಿಕೆ ಕಳವು ಆರೋಪಿಯ ಬಂಧನ ► ಉಂಡ ಮನೆಗೇ ದ್ರೋಹ ಬಗೆದ ಆರೋಪಿ

(ನ್ಯೂಸ್ ಕಡಬ) newskadaba.com ಪುತ್ತೂರು, ಮಾ.13. ತಾನು ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ ಮನೆಯಿಂದಲೇ ಅಡಿಕೆಯನ್ನು ಕಳವುಗೈದ ಘಟನೆ ಕೋಡಿಂಬಾಡಿ ಗ್ರಾಮದ ಶಾಂತಿನಗರದಲ್ಲಿ ನಡೆದಿದ್ದು ಆರೋಪಿ ಚಾಲಕನನ್ನು ಪುತ್ತೂರು ನಗರ ಠಾಣಾ ಪೊಲೀಸರು ಬಂಧಿಸಿದ ಘಟನೆ ಸೋಮವಾರದಂದು ನಡೆದಿದೆ.

ಬಂಧಿತ ಆರೋಪಿಯನ್ನು ಬಂಟ್ವಾಳ ತಾಲೂಕು ವಾಮದಪದವು ನಿವಾಸಿ ರಮೇಶ್ ಎಂದು ಗುರುತಿಸಲಾಗಿದೆ. ಈತ ಪುತ್ತೂರಿನ ಹೊಟೇಲ್ ಉದ್ಯಮಿ ಕೋಡಿಂಬಾಡಿ ಗ್ರಾಮದ ಶಾಂತಿನಗರ‌ ನಿವಾಸಿ ಸುದೇಶ್ ಶೆಟ್ಟಿಯವರ ಮನೆಯಿಂದ ಸುಮಾರು 68 ಸಾವಿರ ರೂ. ಮೌಲ್ಯದ 280 ಕೆ.ಜಿ. ಅಡಿಕೆಯನ್ನು ಕಳವುಗೈದು ತಲೆಮರೆಸಿಕೊಂಡಿದ್ದನೆನ್ನಲಾಗಿದೆ. ಸುದೇಶ್ ಶೆಟ್ಟಿಯವರು ನೀಡಿದ ದೂರಿನಂತೆ ಕೇಸು ದಾಖಲಿಸಿಕೊಂಡ ಪೊಲೀಸರು ಆರೋಪಿ ರಮೇಶ್‌ ನನ್ನು ಬಂಧಿಸಿದ್ದಾರೆ. ಆರೋಪಿಯು ಕಳವುಗೈದ ಅಡಿಕೆಯನ್ನು ಕ್ಯಾಂಪ್ಕೋಗೆ ಮಾರಾಟ ಮಾಡಿದ್ದು, ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

error: Content is protected !!

Join the Group

Join WhatsApp Group