ಕಡಬ: ಯುವ ವಿದ್ವಾಂಸ ರವೂಫ್ ಇರ್ಫಾನಿ ಅಲ್ ಮಖ್ದೂಮಿ ನಿಧನ

(ನ್ಯೂಸ್ ಕಡಬ) newskadaba.com ಕಡಬ, ಅ.01. ತಾಲೂಕಿನ ಮರ್ಧಾಳ ಚಾಕಟೆಕೆರೆ ನಿವಾಸಿ ಹಮೀದ್ ಮುಸ್ಲಿಯಾರ್ ಎಂಬವರ ಪುತ್ರ ಯುವ ವಿದ್ವಾಂಸ ಅಬ್ದುಲ್ ರವೂಫ್ ಇರ್ಫಾನಿ ಅಲ್ ಮಖ್ದೂಮಿ (30) ಅಲ್ಪ ಕಾಲದ ಅಸೌಖ್ಯದಿಂದ ಮಂಗಳವಾರ ಬೆಳಗಿನ ಜಾವ ಸ್ವಗೃಹದಲ್ಲಿ ನಿಧನರಾದರು.

ಕುಂಬ್ಳೆ, ಫರಂಗಿಪೇಟೆ ಹಾಗೂ ಪುತ್ತೂರಿನ ಕಲ್ಲೇಗ ಜುಮಾ ಮಸೀದಿಯಲ್ಲಿ ಸಹಾಯಕ ಮುದರ್ರಿಸ್ ಆಗಿ ಸೇವೆ ಸಲ್ಲಿಸಿದ್ದ ಇವರು ತಂದೆ, ತಾಯಿ, ಪತ್ನಿ, ಒಂದೂವರೆ ವರ್ಷದ ಪುಟ್ಟ ಮಗು ಸೇರಿದಂತೆ ಬಂಧು ಬಳಗ ಹಾಗೂ ಅಪಾರ ಶಿಷ್ಯ ವೃಂದವನ್ನು ಅಗಲಿದ್ದಾರೆ.

Also Read  ಲಾಕ್‍ಡೌನ್ ಸಂಕಷ್ಠ ಎದುರಿಸುತ್ತಿರುವ 92 ಮಂದಿಗೆ ಈದ್ ಕಿಟ್ ವಿತರಣೆ

error: Content is protected !!
Scroll to Top