ನಿವೃತ್ತ ಯೋಧ ದಿ.ಸುಂದರ ಗೌಡ ಅಂಗಣರವರಿಗೆ ನುಡಿನಮನ

(ನ್ಯೂಸ್ ಕಡಬ) newskadaba.com ಕಡಬ, ಸೆ. 25. ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಬಳಿಕ ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ದುಡಿದು ಪರಿಸರದ ಜನರ ಪ್ರೀತಿಗೆ ಪಾತ್ರರಾಗಿ ಇತ್ತೀಚೆಗೆ ನಿಧನರಾದ ಕಡಬ ಅಂಗಣ ಸುಂದರ ಗೌಡ ಅವರಿಗೆ ಪಿಜಕಳ ಶ್ರೀ ಮಹಾವಿಷ್ಣು ದೇವಸ್ಥಾನ ವ್ಯವಸ್ಥಾಪನಾ ಸಮಿತಿ, ಭಜನಾ ಮಂಡಳಿ ಹಾಗೂ ಮಹಿಳಾ ವೇದಿಕೆ ವತಿಯಿಂದ ನುಡಿನಮನ ಸಲ್ಲಿಕೆ ಪಿಜಕಳ ಶ್ರೀ ಮಹಾವಿಷ್ಣು ದೇವಸ್ಥಾನದ ವಠಾರದಲ್ಲಿ ನಡೆಯಿತು.


ಪಿಜಕಳ ಶ್ರೀ ಮಹಾವಿಷ್ಣು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೃಷ್ಣಪ್ಪ ಗೌಡ ಪೂಜಾರಿ ಮನೆ, ನಿವೃತ್ತ ಸೈನಿಕ ಸುಂದರ ಗೌಡ ಪಿ.ಎಮ್. ಕಂಗುಳೆ, ಸಚಿನ್ ಪಿಜಕಳ, ಗಿರಿಧರ ರೈ ಮೃತರ ಗುಣಗಾನ ಮಾಡಿ ನುಡಿನಮನ ಸಲ್ಲಿಸಿದರು. ಮೋಹನ್ ಕುಮಾರ್ ಗೊಡಾಲು ಪ್ರಸ್ತಾವಿಕ ಮಾತನ್ನಾಡಿದರು. ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ದಯಾನಂದ ಗೌಡ ಪೊಯ್ಯೆತ್ತಡ್ಡ, ದೇವರಾಯ ಆಚಾರ್ಯ, ಸತೀಶ್ ಕೋಡಿ, ಭಜನಾ ಮಂಡಳಿಯ ಅಶ್ವತ್, ಕುಶಾಲಪ್ಪ ನಾಯ್ಕ್, ಪ್ರಭಾಕರ, ಪ್ರಮುಖರಾದ ಕೃಷ್ಣ ಅಲೂಂಗೂರು, ಪ್ರಸಾದ್ ಅಲೂಂಗೂರು, ಜೀವನ್ ಪ್ರಕಾಶ್, ರಾಮಣ್ಣ ಗೌಡ ಪಿಜಕಳ, ಯತೀಂದ್ರ ಗೌಡ ಗೊಡಾಲು, ವೇಣುಗೋಪಾಲ ರೈ, ರಾಮಣ್ಣ ಗೌಡ ಗೊಡಾಲು ಮೊದಲಾದವರು ಉಪಸ್ಥಿತರಿದ್ದರು.

error: Content is protected !!

Join the Group

Join WhatsApp Group