ಹುಚ್ಚುನಾಯಿ ದಾಳಿ: ಮಗುವಿಗೆ ಗಂಭೀರ ಗಾಯ..!

(ನ್ಯೂಸ್ ಕಡಬ) newskadaba.com ವಿಜಯನಗರ, ಸೆ. 17.  ಹುಚ್ಚುನಾಯಿಯೊಂದು 3 ವರ್ಷದ ಮಗುವಿಗೆ ಕಚ್ಚಿದ್ದರಿಂದ ಮಗುವಿಗೆ ಗಂಭೀರ ಗಾಯವಾದಂತಹ ಘಟನೆ ಹೊಸಪೇಟೆ ತಾಲೂಕಿನ ಧರ್ಮಸಾಗರ ಗ್ರಾಮದಲ್ಲಿ ನಡೆದಿದೆ.


ರಾಮ ಹಾಗೂ ಲೋಕಮ್ಮ ಅವರ ಮಗಳು ಜನನಿ(3) ಮೇಲೆ ಹುಚ್ಚುನಾಯಿ ದಾಳಿ ನಡೆಸಿದ್ದು, ಮುಖದ ಭಾಗದಲ್ಲಿ ತೀವ್ರ ಗಾಯವಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಮಗುವನ್ನು ಬಳ್ಳಾರಿಯ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ವರದಿ ತಿಳಿದು ಬಂದಿದೆ.

Also Read  'ಬಹು ಪತ್ನಿ ವಲ್ಲಭ' ನಿಂದ ಪುತ್ರಿಯ ಮೇಲೆ ದೌರ್ಜನ್ಯ ➤ ಮಗಳ ಮೇಲೆ ಕಾಮದೃಷ್ಟಿ ಹರಿಸಿದ ಭೂಪ ಜೈಲು ಪಾಲು

 

 

error: Content is protected !!
Scroll to Top