ಮಹಿಳೆ ನಾಪತ್ತೆ- ದೂರು ದಾಖಲು

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 12. ಮಂಗಳೂರಿಗೆ ಹೋದ ಭಾರತಿ ಎಂಬವರು ವಾಪಸ್ ಮನೆಗೆ ಬಾರದೇ ಕಾಣೆಯಾಗಿರುವ ಕುರಿತು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ದಿ  ಯೋಜನೆಯಲ್ಲಿ  ಮನೆ ರಿಪೇರಿಗಾಗಿ ಸಾಲ ಪಡೆದುಕೊಂಡಿದ್ದ ಇವರು, ಮರುಪಾವತಿಸಲು ಜುಲೈ 7ರಂದು ಮಂಗಳೂರಿಗೆ ಹೋದವರು ಮನೆಗೆ ಪಾಪಸ್ ಬಾರದೇ ಕಾಣೆಯಾಗಿದ್ದಾರೆ ಎನ್ನಲಾಗಿದೆ. ನಾಪತ್ತೆಯಾದ ಮಹಿಳೆಯ ಚಹರೆ: ಎತ್ತರ 5.4 ಅಡಿ, ಉರುಟು ಮುಖ, ಗೋಧಿ ಮೈಬಣ್ಣ, ಸಪೂರ ಶರೀರ. ಮಾತನಾಡುವ ಭಾಷೆ ಕನ್ನಡ, ತುಳು,. ಕೆಂಪು ಬಣ್ಣದ ಚೂಡಿದಾರ ಟಾಫ್, ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದರು. ಕಿವಿಯಲ್ಲಿ ಚಿನ್ನದ 2 ಪವನಿನ ಲಕ್ಷ್ಮೀ ಪೆಂಡೆಂಟ್ ಇರುವ ಬೆಂಡೋಲೆ ಒಂದು ಜೊತೆ, ಒಂದು ಪವನಿನ ಕರಿಮಣಿ ಸರ ಧರಿಸಿದ್ದರು.

Also Read  ಜಂಬೂಸವಾರಿ: ಸರಳ ದಸರಾಗೆ ಅರಣ್ಯ ಇಲಾಖೆಯಿಂದ ಐದು ಆನೆಗಳ ಪಟ್ಟಿ ಸಿದ್ದ

ಕಾಣೆಯಾದವರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾದಲ್ಲಿ ದೂರವಾಣಿ ಉಪ್ಪಿನಂಗಡಿ ಠಾಣೆ 08251-251055, ಜಿಲ್ಲಾ ನಿಸ್ತಂತು ವಿಭಾಗ 0824-2220500 ಉಪ್ಪಿನಂಗಡಿ ಸಹಾಯಕ ಪೊಲೀಸ್ ಉಪನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!
Scroll to Top