ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾರಿಂದ ಅನುದಾನ ► ಕೊಯಿಲ – ಗಂಡಿಬಾಗಿಲು ರಸ್ತೆ ದುರಸ್ತಿಗೆ ಶಂಕುಸ್ಥಾಪನೆ

(ನ್ಯೂಸ್ ಕಡಬ) newskadaba.com ಕಡಬ, ಮಾ.01. ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜಾರವರ ಅನುದಾನದಲ್ಲಿ ಕೊಯಿಲ -ಗಂಡಿಬಾಗಿಲು ರಸ್ತೆ ದುರಸ್ಥಿ ಕಾಮಗಾರಿಗೆ ಗಂಡಿಬಾಗಿಲು ಎಂಬಲ್ಲಿ ಶಂಕುಸ್ಥಾಪನೆ ನೆರವೇರಿಸಲಾಯಿತು.

ಜಿಲ್ಲಾ ಪಂಚಾಯಿತಿ ಸದಸ್ಯ ಸರ್ವೋತ್ತಮ ಗೌಡ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜಾರವರು ಅಲ್ಪಸಂಖ್ಯಾತ ಅಭಿವೃದ್ಧಿ ಯೋಜನೆಯಡಿಯಲ್ಲಿ 5 ಲಕ್ಷ ರೂಪಾಯಿ ಅನುದಾನ ಮಂಜೂರು ಮಾಡಿದ್ದಾರೆ. ಇದರ ಮುಂದಿನ ಶಾಖೆಪುರ ತನಕದ ಕಾಮಗಾರಿಗೆ ಈಗಾಗಲೇ ಅವರಿಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಮುಂದಿನ ಹಂತದಲ್ಲಿ ಅನುದಾನ ನೀಡುವುದಾಗಿ ತಿಳಿಸಿದ್ದಾರೆ ಎಂದರು. ಈ ಸಂದರ್ಭದಲ್ಲಿ ಕಡಬ ಜಿಲ್ಲಾ ಪಂಚಾಯಿತಿ ಸದಸ್ಯ ಪಿ.ಪಿ. ವರ್ಗೀಸ್, ಕೊಯಿಲ ಗ್ರಾಮ ಪಂಚಾಯಿತಿ ಸದಸ್ಯರಾದ ಕೆ.ಎ. ಸುಲೈಮಾನ್, ನಝೀರ್ ಪೂರಿಂಗ, ಮಾಜಿ ಸದಸ್ಯರಾದ ಪುರಂದರ ರೈ, ಎಸ್. ಅಬ್ದುಲ್ ರಹಿಮಾನ್, ಪಕ್ಷದ ಮುಖಂಡರಾದ ಅಶ್ರಫ್ ಕಡಬ, ಮಹಮ್ಮದ್ ಶರೀಫ್ ಕಡಬ, ತೋಮಸ್ ಕಡಬ, ಸ್ಥಳೀಯ ಪಕ್ಷದ ಕಾರ್ಯಕರ್ತರಾದ ಪುತ್ತುಮೋನು ಕೆಮ್ಮಾರ, ಅಣ್ಣು, ನಿಸಾರ್ ಗಂಡಿಬಾಗಿಲು, ಅಬ್ದುಲ್ ಲತೀಫ್ ಗಂಡಿಬಾಗಿಲು ಮೊದಲಾದವರು ಉಪಸ್ಥಿತರಿದ್ದರು.

error: Content is protected !!

Join the Group

Join WhatsApp Group