ಮುಡಾ ಪ್ರಕರಣ- ಸೆ. 09ರ ವರೆಗೆ ಸಿಎಂ ಸಿದ್ದರಾಮಯ್ಯಗೆ ರಿಲೀಫ್..!

(ನ್ಯೂಸ್ ಕಡಬ) newskadaba.com ಬೆಂಗಳೂರು, ಆ. 02. ಸಿಎಂ ಸಿದ್ದರಾಮಯ್ಯ ವಿರುದ್ದ ರಾಜ್ಯಪಾಲರು ನೀಡಿರುವ ಪ್ರಾಸಿಕ್ಯೂಷನ್ ವಿರೋಧಿಸಿ ಸಲ್ಲಿಸಿರುವ ರಿಟ್‌ ಪಿಟಿಷನ್‌ ವಿಚಾರಣೆಯನ್ನು ಹೈಕೋರ್ಟ್‌ ಸೆಪ್ಟೆಂಬರ್‌ 9 ಕ್ಕೆ ಮುಂದೂಡಲಾಗಿದೆ.

ಇವತ್ತೂ ಕೂಡಾ ರಾಜ್ಯಪಾಲರ ಪರ ವಕೀಲ, ಇತರೆ ದೂರುದಾರರ ಪರ ವಕೀಲರು ಇಂದು ವಾದ ಮಂಡನೆ ಮಾಡಿದರು. ಪ್ರಕರಣದಲ್ಲಿ ಮಾಲೀಕರೇ ಅಲ್ಲದವರು ಮುಡಾಗೆ ಅರ್ಜಿ ಸಲ್ಲಿಸಿದ್ದಾರೆ. ಡಿನೋಟಿಫೈ ಮಾಡಿಸಿಕೊಂಡಿದ್ದಾರೆ. ಜಮೀನೇ ಇಲ್ಲದಿದ್ದರೂ ಪರಿಹಾರವಾಗಿ 14 ಸೈಟ್‌ ಗಳನ್ನು ಪಡೆಯಲಾಗಿದೆ ಎಂದು ವಾದ ಮಾಡಲಾಗಿದೆ. ಇನ್ನು ಸಿಎಂ ಪರ ವಕೀಲರು ಸಮಯಾವಕಾಶ ಕೇಳಿದ್ದರಿಂದ ಜಡ್ಜ್‌ ಅದಕ್ಕೆ ಅವಕಾಶ ಕೊಟ್ಟು, ಸೋಮವಾರಕ್ಕೆ ವಿಚಾರಣೆ ಮುಂದೂಡಿದ್ದಾರೆ. ಹೀಗಾಗಿ, ಸಿಎಂ ಸಿದ್ದರಾಮಯ್ಯ ಅವರಿಗೆ ಸೋಮವಾರದವರೆಗೆ ರಿಲೀಫ್‌ ಸಿಕ್ಕಂತಾಗಿದೆ.

error: Content is protected !!

Join the Group

Join WhatsApp Group