ಕಡಬ: ಮೊಗೇರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ

(ನ್ಯೂಸ್ ಕಡಬ) newskadaba.com ಕಡಬ, ಆ. 30. ಇಲ್ಲಿನ ಶ್ರೀ ದುರ್ಗಾಂಬಿಕ ದೇವಸ್ಥಾನದ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಸಕ್ರಿಯವಾಗಿರುವ ಮೊಗೇರ ಸಂಘದ ನೂತನ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು.


ಸಮಿತಿಯ ನೂತನ ಅಧ್ಯಕ್ಷರಾಗಿ ಶಶಿಧರ್ ಬೊಟ್ಟಡ್ಕ, ಪ್ರಧಾನ ಕಾರ್ಯದರ್ಶಿಯಾಗಿ ಆನಂದ್ ಕುಮಾರ್ ಕಜೆ ಅವರನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ವಸಂತ ಕುಬಲಾಡಿ, ಮಹಾಬಲ ಪಡುಬೆಟ್ಟು, ಕೋಶಾಧಿಕಾರಿ ಗೋಪಾಲ್ ಬೀಡು, ಜೊತೆ ಕಾರ್ಯದರ್ಶಿ ದಿನೇಶ್ ಗಾಣಂತಿ, ಸಾಂಸ್ಕೃತಿಕ ಕಾರ್ಯದರ್ಶಿ ಹರ್ಷ ಕೋಡಿ, ಕ್ರೀಡಾ ಕಾರ್ಯದರ್ಶಿ ಮಹೇಶ್ ಪಟ್ಲಡ್ಕ, ಮಾಧ್ಯಮ ಕಾರ್ಯದರ್ಶಿ ಸತೀಶ್ ಕೈಕಂಬ ಅವರನ್ನು ಆಯ್ಕೆ ಮಾಡಲಾಯಿತು. ಆನಂದ ಹೊಸ್ಮಠ, ಚಂದ್ರಹಾಸ ಬಲ್ಯ , ಉಷಾ ಕೋಡಿ, ಅಣ್ಣಿ ಪರಪ್ಪು, ಶೀನಪ್ಪ ದೇರೋಡಿ, ಆನಂದ ದೇವರಗದ್ದೆ ಅವರನ್ನು ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು. ಗೌರವ ಸಲಹೆಗಾರರಾಗಿ ಮಾಯಿಲಪ್ಪ ಮಾಸ್ಟರ್, ರವಿಚಂದ್ರ ಪಡುಬೆಟ್ಟು, ವಿಜಯ್ ವಿಕ್ರಂ ಗಾಂಧಿಪೇಟೆ, ತನಿಯಪ್ಪ ಸಂಪಡ್ಕ, ಕೊಗ್ಗು ದೇವರ ಗದ್ದೆ ಆಯ್ಕೆಯಾಗಿದ್ದಾರೆ.

error: Content is protected !!

Join the Group

Join WhatsApp Group