ಸಿರಿಬಾಗಿಲು ಶಾಲಾ ಶಿಕ್ಷಕ ದಿನೇಶ್ ಆಚಾರ್ಯ ರವರಿಗೆ ಬೀಳ್ಕೊಡುಗೆ

(ನ್ಯೂಸ್ ಕಡಬ) newskadaba.com ಸಿರಿಬಾಗಿಲು, ಆ. 30. 18 ವರ್ಷಗಳ ಕಾಲ ಸೇವೆ ಸಲ್ಲಿಸಿ ವರ್ಗಾವಣೆಗೊಂಡ ಸಿರಿಬಾಗಿಲು ಶಾಲಾ ಶಿಕ್ಷಕ ದಿನೇಶ್ ಆಚಾರ್ಯ ರವರನ್ನು ಶಾಲಾ ಎಸ್ ಡಿ ಎಮ್ ಸಿ, ಹಳೇ ವಿದ್ಯಾರ್ಥಿ ಸಂಘ, ಅಂಗನವಾಡಿ ಹಾಗೂ ಊರವರ ಪರವಾಗಿ ಬೀಳ್ಕೊಡುಗೆ ಸಮಾರಂಭ ನಡೆಸಲಾಯಿತು.

ಈ ಸಂದರ್ಭದಲ್ಲಿ ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಮನೋಹರ್ ಕಟ್ಟೆ, ಕೊಂಬಾರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರು, ಉಪಾಧ್ಯಕ್ಷೆ ಮಮತಾ, ಹಳೇವಿದ್ಯಾರ್ಥಿ ಸಂಘದ ಅಧ್ಯಕ್ಷ ಗಣೇಶ್ ಅನಿಲ, ಮಧುಕೃಷ್ಣ ಕಟ್ಟೆ, ಅಂಗನವಾಡಿ ಕಾರ್ಯಕರ್ತೆ ವನಜಾಕ್ಷಿ, ವಿಜಯ ನಡುತೋಟ  ಮೊದಲಾದವರು ಉಪಸ್ಥಿತರಿದ್ದರು,

error: Content is protected !!

Join the Group

Join WhatsApp Group