ಸುಳ್ಯ ತಾಲೂಕು ಆಂಬುಲೆನ್ಸ್ ವಾಹನ ಚಾಲಕ ಮಾಲಕರ ಸಂಘ ಅಸ್ತಿತ್ವಕ್ಕೆ

(ನ್ಯೂಸ್ ಕಡಬ) newskadaba.com ಸುಳ್ಯ,ಆ. 24. ಸುಳ್ಯ ತಾಲೂಕು ಆಂಬುಲೆನ್ಸ್ ವಾಹನ ಚಾಲಕ ಮಾಲಕರ ಸಂಘವು ಸುಳ್ಯ ಉಡುಪಿ ಗಾರ್ಡನ್ ನಲ್ಲಿ ಇಂದು ಶಿವ ಪ್ರಸಾದ್ ರವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಯಿತು.

ಶರತ್ ತೊಡಿಕಾನ ಪ್ರಾಸ್ತಾವಿಕ ಮಾತನಾಡಿದರು.‌ಗೌರವಾಧ್ಯಕ್ಷರಾಗಿ ಶಿವಪ್ರಸಾದ್ ಕೆಜಿ, ಅಧ್ಯಕ್ಷರಾಗಿ ಶರತ್ ಎ.ತೊಡಿಕಾನ, ಪ್ರಧಾನ ಕಾರ್ಯದರ್ಶಿಯಾಗಿ ಸಿದ್ದೀಕ್ ಗೂನಡ್ಕ, ಕೋಶಾಧಿಕಾರಿ ರಫೀಕ್ ಬಿ.ಎಂ.ಎ ಸುಳ್ಯ, ಉಪಾಧ್ಯಕ್ಷರಾಗಿ ಉನೈಸ್ ಪೆರಾಜೆ, ಜೊತೆ ಕಾರ್ಯದರ್ಶಿಯಾಗಿ ಪ್ರದೀಪ್ ಸುಬ್ರಹ್ಮಣ್ಯ, ಮೀಡಿಯಾ ಕಾರ್ಯದರ್ಶಿ ರಫಿಕ್ ಬಾಳೆಮಕ್ಕಿ, ಸದಸ್ಯರುಗಳಾಗಿ ಕೇಶವ ಬೆಳ್ಳಾರೆ, ಹಮೀದ್ ಬೆಳ್ಳಾರೆ, ಹನೀಫ್ ಕೆವಿಜಿ ಸುಳ್ಯ, ಆನಂದ 108 ಸುಳ್ಯ ,ಉದಯ ಪಂಚಶ್ರಿ, ರಾಜಶೇಖರ 108 ಸುಳ್ಯ, ಸೀತಾರಾಮ 108 ಸುಳ್ಯ, ಪ್ರಶಾಂತ್ ಜ್ಯೋತಿ ಸೇವಾಭಾರತಿ, ಸಿದ್ದೀಕ್ ಜಟ್ಟಿಪಳ್ಳ, ಸಮೀರ್ ಕಾಣಿಯೂರು, ಪ್ರಶಾಂತ್ ಕೆವಿಜಿ ಸುಳ್ಯ, ವಿನಯ್ ಎಜೆ, ಫೈಝಲ್ ಎಐಕೆಎಂಸಿ ಸುಳ್ಯ, ಜಯಪ್ರಕಾಶ್ ಕೆವಿಜಿ ಸುಳ್ಯ, ತಾಜುದ್ದೀನ್ ಟರ್ಲಿ ಕಲ್ಲುಗುಂಡಿ, ರಾಧಾಕೃಷ್ಣ ಅಮರ ಗುತ್ತಿಗಾರು, ಉದಯ ಕೊಲ್ಲಮೊಗ್ರು, ಆರ್ ಬಿ ಬಷೀರ್ ಪೈಚಾರ್, ಅಜಿತ್ ಮಾಡಾವು ಅವರನ್ನು ಆಯ್ಕೆ ಮಾಡಲಾಯಿತು. ಸಿದ್ದೀಕ್ ಗೂನಡ್ಕ ಸ್ವಾಗತಿಸಿ, ರಫೀಕ್ ಲೈಫ್ ಕೇರ್ ಧನ್ಯವಾದಗೈದರು.

error: Content is protected !!

Join the Group

Join WhatsApp Group